ಬಿಹಾರ ಭಾರತದ ಅಪರಾಧಿ ಚಟುವಟಿಕೆಗಳ ರಾಜಧಾನಿ: ರಾಹುಲ್ ಗಾಂಧಿ

Bihar is the criminal capital of India: Rahul Gandhi

ರಾಜಗೀರ್ 06: ಮುಖ್ಯಮಂತ್ರಿ ನಿತೀಶ್ಕುಮಾರ್ಅವರ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಬಿಹಾರಭಾರತದ ಅಪರಾಧಿ ಚಟುವಟಿಕೆಗಳ ರಾಜಧಾನಿಯಾಗುತ್ತಿದೆ ಎಂದು ಕಾಂಗ್ರೆಸ್ನಾಯಕ ರಾಹುಲ್ಗಾಂಧಿ ಆರೋಪಿಸಿದ್ದಾರೆ.

ಶುಕ್ರವಾರ ನಳಂದದಲ್ಲಿಸಂವಿಧಾನ ಸುರಕ್ಷಾ ಸಮ್ಮೇಳನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.

ಬಿಹಾರವು ಒಂದು ಕಾಲದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಹೆಸರಾಗಿತ್ತು. ಇದೀಗ ಅಪರಾಧಿ ಚಟುವಟಿಕೆಗಳ ತಾಣವಾಗಿದೆ ಎಂದು ಹೇಳಿದರು.

ಹಿಂದುಳಿದ ವರ್ಗ, ದಲಿತರು ಹಾಗೂ ಬುಡಕಟ್ಟು ಅಧಿಕಾರಿಗಳು ಇಲ್ಲದೇ ಜಾತಿಗಣತಿಯ ಪ್ರಶ್ನೆಗಳನ್ನು ತಯಾರಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಜಾತಿಗಣತಿ ವರದಿಯ ಕುರಿತು ಅನುಮಾನ ವ್ಯಕ್ತವಾಗುತ್ತಿದೆ ಎಂದರು.

ಸಂವಿಧಾನ ಉಳಿಸಲು ಹಾಗೂ ದೇಶದ ಅಭಿವೃದ್ಧಿಗಾಗಿ ನಾನು ಜಾತಿಗಣತಿಗಾಗಿ ಹೋರಾಡುತ್ತೇನೆ. ನಾವು ಮುಂದೊಂದು ದಿನ ಸರ್ಕಾರವನ್ನು ರಚಿಸಿದರೆ, ಶೇ.50ರಷ್ಟು ಮಾತ್ರ ಮೀಸಲಾತಿ ನೀಡಬೇಕು ಎನ್ನುವ ನಿಯಮದಲ್ಲಿ ಬದಲಾವಣೆ ತರುತ್ತೇವೆ. ಇದು ಬಿಹಾರದಿಂದಲೇ ಶುರುವಾಗಲಿದೆಎಂದು ತಿಳಿಸಿದರು.