ಧ್ಯಾನದಿಂದ ಕಾಯಿಲೆಗಳು ದೂರ
Meditation keeps diseases away
ಹನಮಸಾಗರ 11: ಅನಾಪಾನ ಧ್ಯಾನದಿಂದ ನಾವು ಎಲ್ಲವನ್ನು ಪಡೆಯಬಹುದು ಎಂದು ಬೆಂಗಳೂರಿನ ಮಾಸ್ಟರ್ ಲಲಿತಾ ಪವಾರ ಹೇಳಿದರು.
ಗ್ರಾಮದ ಶ್ರೀ ಕರಿಸಿದ್ದೇಶ್ವರ ಬಸವ ಮಂಟಪದಲ್ಲಿ ಸೋಮವಾರ ಸಂಜೆ ಮಂಡಲ ಸಂಕಲ್ಪ ಧ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನಸಿಕ ನೆಮ್ಮದಿಗೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ಮಧುಮೇಹ, ಬಿಪಿಯಿಂದ ಬಳಲುವಂತಹವರು ಈ ಧ್ಯಾನದಿಂದ ಕೆಲವೇ ದಿನಗಳಲ್ಲಿ ಯತಾಸ್ಥಿತಿಗೆ ಬರುತ್ತಾರೆ. ಇದನ್ನು ಎಲ್ಲಿಯಾದರೂ, ಸುಖಾಸನದಿಂದ ಕುಳಿತುಕೊಂಡು ಮಾಡಬಹುದಾಗಿದೆ. ಸಹಜವಾದ ಉಸಿರಾಟವನ್ನು ಗಮನಿಸುತ್ತಾ ಹೊಗಬೇಕು.
ಧ್ಯಾನ ಎಂದರೆ ಉಸಿರಾಟದ ಮೇಲೆ ಗಮನ, ಒಂದು ದಿವಸ ಬಿಡದೆ ಮಾಡಬೇಕು ಇದರಿಂದ ನಮಗೆ ಬ್ರಹ್ಮಾಂಡದ ವಿಶ್ವಶಕ್ತಿ ನಮಗೆ ಸಿಗುತ್ತದೆ. ಇದೇ ಮಾ.16 ರಂದು ಶ್ರೀ ಕರಿಸಿದ್ದೇಶ್ವರ ಬಸವ ಮಂಟಪದಲ್ಲಿ ಉಚಿತವಾಗಿ ಧ್ಯಾನ ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ. ತಪ್ಪಿಸದೆ ಎಲ್ಲರೂ ಆಗಮಿಸಿ ಸದುಪಯೋಗ ಪಡೆದುಕೊಳ್ಳ ಎಂದರು.
ಇದೇ ವೇಳೆ ಪತ್ರಿಕಟ್ಟಿ ಬಸವೇಶ್ವರ ತರುಣ ಸಂಘ, ನಿಸರ್ಗ ಸಂಗೀತ ವಿದ್ಯಾಲಯ ಸಂಘ, ಡಾ.ಪುಟ್ಟರಾಜ ಗಾನಯೋಗಿ ಭಜನಾ ಸಂಘ, ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಘ, ಅಕ್ಕಮಾಹಾದೇವಿ ಬಳಗ ಸೇರಿದಂತೆ ನಾನಾ ಸಂಘದವರು ಭಾಗಿಯಾಗಿದ್ದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 