ಕಾರವಾರ 14: ಲಂಚ ಪಡೆಯುವ ವೇಳೆ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಾರವಾರ ನಗರ ಅಭಿವೃದ್ಧಿ ಪ್ರಾಧಿಕಾರದ ಯೋಜಕ ಸದಸ್ಯ ಶಿವಾನಂದ ತಾಮ್ರೆಣ್ಣನವರ ಬಲೆಗೆ ಬಿದ್ದ ಅಧಿಕಾರಿ. ಕಾರವಾರ ನಗರಾಭಿವೃದ್ಧಿ ಕಚೇರಿಯಲ್ಲಿ ಅಪರಾಹ್ನ ಈ ದಾಳಿ ನಡೆದಿತ್ತು.ಟೌನ್ ಪ್ಲಾನಿಂಗ್ ಪ್ಲಾಟ್ ಒಂದರ ಯೋಜನೆ ಅನುಮೋದನೆಗೆ10 ಸಾವಿರ ರೂ. ಹಣ ಲಂಚ ಪಡೆಯುವ ವೇಳೆ ಲೋಕಾಯುಕ್ತ ಎಸ್ಪಿ ಕುಮಾರಚಂದ್ ನೇತೃತ್ವದಲ್ಲಿ, ಲೋಕಾಯುಕ್ತ ಡಿವೈಎಸ್ಪಿ, ಹಾಗೂ ಸಿಬ್ಬಂದಿ , ಹೆಡ್ ಕಾನ್ಸಸ್ಟೇಬಲ್ ಶಿವಕುಮಾರ್ ಸೇರಿ ದಾಳಿ ಮಾಡಿದರು. ನಾಗರಿಕ ಪ್ರಶಾಂತ್ ನಾಯ್ಕ ಎಂಬುವವರಿಂದ ಶಿವಾನಂದ ತಾಮ್ರೆಣ್ಣನವರ ಲಂಚದಹಣ ಪಡೆಯುವ ವೇಳೆಲೋಕಾಯುಕ್ತ ದಾಳಿ ನಡೆಸಿ, ಬಂಧಿಸಿದ್ದಾರೆ.