ಜೀತ ಪದ್ಧತಿಯಿಂದ ವಿಮುಕ್ತಿ
ಲೋಕದರ್ಶನ ವರದಿ
ಬೈಲಹೊಂಗಲ: ರಾಮದುರ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿದ್ದ 90 ಜನ ಜೀತದಾಳುಗಳಿಗೆ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಜೀತ ಪದ್ಧತಿಯಿಂದ ವಿಮುಕ್ತಿಗೊಳಿಸಿ ಬುಧವಾರ ಬಿಡುಗಡೆ ಪತ್ರ ನೀಡಿದರು.
ರಾಮದುರ್ಗ ತಾಲೂಕಿನ ಚುಂಚನೂರನಲ್ಲಿನ 22, ಕುಳ್ಳೂರ 22, ಕಮಕೇರಿ 18, ಬುದ್ನಿ 6, ತೊಂಡಿಗಟ್ಟಿ 18, ರಾಮದುರ್ಗ 4 ಜೀತದಾಳುಗಳಿದ್ದರು. ಜೀವಿಕ ಸಂಘಟನೆಯವರು ಜೀತದಾಳುಗಳನ್ನು ಗುರುತಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಗ್ರಾಮ ಪಂಚಾಯತ ಕಮೀಟಿ ಮೂಲಕ ಸವರ್ೇ ಮಾಡಿಸಿ ಪತ್ತೆ ಮಾಡಿದ್ದರಿಂದ 90 ಜನ ಜೀತದಾಳುಗಳು ದೊರೆತ್ತಿದ್ದಾರೆ. ಅವರಿಗೆ ಬಿಡುಗಡೆ ಭಾಗ್ಯ ದೊರೆತ್ತಿದ್ದು, ಬಿಡುಗಡೆ ಹೊಂದಿದ 90 ಜನರು ಖುಷಿಖುಷಿಯಾಗಿ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಹೊರ ಬಂದರು.
ಜೀವಿಕ ಸಂಘಟನೆ ಜಿಲ್ಲಾ ಸಂಚಾಲಕ ರುದ್ರಪ್ಪ ಮುಂದಿನಮನಿ, ಸಂಚಾಲಕ ಕೃಷ್ಣಾ ಸಾಲಿಮನಿ, ಒಕ್ಕೂಟ ಅಧ್ಯಕ್ಷ ಲಕ್ಕಪ್ಪ ಜಟ್ಟೇನ್ನವರ, ಸಿದ್ದಪ್ಪ ಜಟ್ಟೆನ್ನವರ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 