ಪ್ರಥಮ ಸ್ಥಾನ ತಾಲೂಕಾಡಾಳಿತ ಕಾಯ್ದುಕೊಳ್ಳಲಿ : ದುಂಡಿಗೌಡ್ರ

ಪ್ರಥಮ ಸ್ಥಾನ ತಾಲೂಕಾಡಾಳಿತ ಕಾಯ್ದುಕೊಳ್ಳಲಿ : ದುಂಡಿಗೌಡ್ರ  Let taluk administration remain the first priority: Dundigowdra

   ಲೋಕದರ್ಶನ ವರದಿ  

ಶಿಗ್ಗಾವಿ 25 : ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾವಿ ತಾಲೂಕ ಎಸ್‌.ಎಸ್‌.ಎಲ್‌.ಸಿ ಫಲಿತಾಂಶದಲ್ಲಿ 97.78ಅ ರಷ್ಟು   ವಿದ್ಯಾರ್ಥಿಗಳು ಉತ್ತೀರ್ಣರಾಗಿ ಜಿಲ್ಲೆಗೆ ಪ್ರಥಮವಾಗಿರುವ ವಿಷಯ ಹೆಮ್ಮೆ ತಂದಿದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. 2025-2026 ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಉದ್ದೇಶಿಸಿ  ಮಾತನಾಡಿದ ಅವರು   ಈ ತರಹದ ಸಾಧನೆ ಪ್ರತಿ ವರ್ಷವೂ ಸಹ ಹೀಗೆ ಮುಂದುವರೆಯಲಿ ಇದಕ್ಕೆ ಬೇಕಾಗುವ ಸಲಹೆ ಸಹಕಾರವನ್ನು ತಾಲ್ಲೂಕ ಆಡಳಿತ ಒದಗಿಸಲಿ ಎಂದು ವಿನಂತಿಸಿದರು. ಸಾಧನೆಗೆ ಶ್ರಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕಿನ ಶಿಕ್ಷಕರಿಗೆ, ಸಿಬ್ಬಂದಿ ವರ್ಗಕ್ಕೆ, ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.