ಬಿಎಲ್ ಎ ಎಸ್ ಐ ಆರ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿರಿ : ಶಾಸಕ ಪಠಾಣ

ಬಿಎಲ್ ಎ ಎಸ್ ಐ ಆರ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿರಿ : ಶಾಸಕ ಪಠಾಣ Know complete information about BLASIR: MLA Pathana

ಲೋಕದರ್ಶನ ವರದಿ 

ಶಿಗ್ಗಾವಿ  25: ಪ್ರತಿಯೊಬ್ಬ ಬಿ ಎಲ್ ಎ ಎಸ್ ಐ ಆರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳ ಬೇಕು ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ಪಟ್ಟಣದ ಗುಜರಾತ್ ಶಾದಿ ಮಹಲನಲ್ಲಿ ನಡೆದ ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಶಿಗ್ಗಾವ್ ಸವಣೂರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬಿ ಎಲ್ ಎ -2 ರವರಿಗೆ ಎಸ್ ಐ ಆರ್ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು ನಿಮ್ಮ ಬೂತನಲ್ಲಿ ಯಾವುದೇ ವೋಟರ್ ಗಳು ರದ್ದಾಗಬಾರದು ಅದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಪ್ರತಿಯೊಬ್ಬರಿಗೆ ವೋಟರ್ ನೋಂದಣಿಯನ್ನು ಮಾಡಿಸಬೇಕು ಎಂದರು. 

ಜಿಲ್ಲಾ ಅಧ್ಯಕ್ಷ ಸಂಜೀವ ಕುಮಾರ ನೀರಲಗಿ ಮಾತನಾಡಿ ಮೊದಲನೆಯದಾಗಿ ಬಿ ಎಲ್ ಎ ಗಳ ಕೆಲಸವನ್ನು ಏನೇ ಎಂದು ತಿಳಿದುಕೊಳ್ಳಬೇಕು ಒಂದು ಬೂತನಲ್ಲಿ ಪಕ್ಷ ಗೆಲ್ಲಬೇಕೆಂದರೆ ಬಿ ಎಲ್ ಎ ಗಳ ಮಹತ್ವ ಮತ್ತು ಕೆಲಸ ಬಹಳಷ್ಟು ಇದೆ ಬಿ ಎಲ್ ಎ ಗಳು ತಮ್ಮ ಬೂತನಲ್ಲಿ ಎಷ್ಟು ವೋಟರ ಗಳಿವೆ ಯಾವುದು ಹೊಸದಾಗಿ, ರದ್ದಾಗಿರುವ , ವರ್ಗಾವಣೆಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರ ಬೇಕು ಬೂತ ಗೆಲ್ಲಬೇಕು ಅಂದರೆ ಬಿ ಎಲ್ ಎ ಗಳು ಹಾಗೂ ಅಧ್ಯಕ್ಷರು ಪ್ರಾಮಾಣಿಕವಾಗಿ ಕೆಲಸಮಾಡಿ ಪಕ್ಷವನ್ನು ಗೆಲ್ಲಿಸಬೇಕು ಎಂದರು.ಉಪನ್ಯಾಸಕ ಮುತ್ತುರಾಜ್ ರವರು ಎಸ್ ಐ ಆರ್ ಬಗ್ಗೆ ಸವಿಸ್ತಾರವಾಗಿ ವಿವರಣೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಮೆಹರವಾಡೆ, ಶಿಗ್ಗಾವಿ ಬ್ಲಾಕ್ ಅಧ್ಯಕ್ಷ ಎಸ್‌.ಎಫ್‌. ಮಣಕಟ್ಟಿ, ಸವಣೂರ ಬ್ಲಾಕ್ ಅಧ್ಯಕ್ಷ ರಮೇಶ ಹರಿಜನ, ಒಬಿಸಿ ಘಟಕ ಅದ್ಯಕ್ಷ ಕೃಷ್ಣಪ್ಪ ಕಂಬಳಿ, ಶಂಬು ಆಜೂರ್, ಮಹಾಂತೇಶ್ ಸಾಲಿ ಸೇರಿದಂತೆಬಿ ಎಲ್ ಎ 2 ಗಳು ಮತ್ತು ಹಿರಿಯ ಹಾಗೂ ಯುವ ಮುಖಂಡರು ಉಪಸ್ಥಿತರಿದ್ದರು