ಬೆಳೆವಿಮೆ ಪರಿಹಾರ ಚೆಕ್ ವಿತರಣೆ
ಲೋಕದರ್ಶನವರದಿ
ರಾಣೇಬೆನ್ನೂರು.19: ತಾಂತ್ರಿಕ ದೋಷದಿಂದಾಗಿ 2015-16 ನೇ ಸಾಲಿಗಾಗಿ ತಡವಾಗಿ ಬಿಡುಗಡೆಯಾದ ತಾಲೂಕಿನ ಹೊನ್ನತ್ತಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಎತ್ತಿನಹಳ್ಳಿ ಗ್ರಾಮದ ಬೆಳೆವಿಮೆಯ ಅಂದಾಜು 1.30ಕೋಟಿ ರೂ. ಮೊತ್ತದ ಪರಿಹಾರದ ಚೆಕ್ಗಳನ್ನು ಬುಧವಾರ ಇಲ್ಲಿನ ಕೆಸಿಸಿ ಬ್ಯಾಂಕ ಸಭಾಭವನದಲ್ಲಿ 215 ಫಲಾನುಭವಿಗಳಿಗೆ ವಿತರಿಸಲಾಯಿತು.
ಚೆಕ್ ವಿತರಿಸಿ ಮಾತನಾಡಿದ ಜಿಪಂ ಸದಸ್ಯ ಏಕನಾಥ ಬಾನುವಳ್ಳಿಯವರು ನಿರಂತರವಾದ ಹೋರಾಟದ ಫಲವಾಗಿ ಈ ಪರಿಹಾರ ಲಭಿಸಿದ್ದು ರೈತರಿಗೆ ಸಂದ ಜಯವಾಗಿದೆ ಎಂದರು. ಕೆಸಿಸಿ ಬ್ಯಾಂಕ್ ನಿದರ್ೇಶ ಬಸನಗೌಡ ಪಾಟೀಲ, ವ್ಯವಸ್ಥಾಪಕ ರುದ್ರಪ್ಪ ಎ, ನಿರೀಕ್ಷಕ ಆರ್, ನಟರಾಜ, ಸಹಾಯಕ ಕೃಷಿ ನಿದರ್ೇಶಕ ಎಚ್.ಪಿ.ಗೌಡಪ್ಪಗೌಡ್ರ, ಚಂದ್ರಯ್ಯ ಹಿರೇಮಠ ಸೇರಿದಂತೆ ರೈತರು ಮತ್ತಿತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 