ಅನುಕಂಪಕ್ಕಿಂತ ಸಹಾಯ ನೀಡುವ ಕೈಗಳು ಶ್ರೇಷ್ಠ: ಸುರೇಶಗೌಡ
ಲೋಕದರ್ಶನವರದಿ
ಬ್ಯಾಡಗಿ:ಪ್ರಕೃತಿಯ ಮುಂದೇ ಮಾನವ ಶೂನ್ಯ ಎಂಬ ಮಾತನ್ನು ಮತ್ತೆ ಸ್ವತಃ ಪ್ರಕೃತಿ ಸಾಬೀತು ಪಡಿಸಿದೆ. ಮಾನವ ತಾನೇ ಮಾಡಿದ ಸ್ವಯಂ ಕೃತ ಅಪರಾಧಕ್ಕೆ ಬೆಲೆ ತೆರುವಂತಾಗಿದ್ದು ಪ್ರಕೃತಿ ವಿಕೋಪಗಳು ನಡೆದಾಗ ಅನುಕಂಪಕ್ಕಿಂತ ಸಹಾಯ ಹಸ್ತ ಚಾಚುವ ಕೈಗಳು ಶ್ರೇಷ್ಠವೆನಿಸಿಕೊಳ್ಳತ್ತವೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.
ಪಟ್ಟಣದ ಶಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಉತ್ತರ ಕನರ್ಾಟದ ನೆರೆ ಸಂತ್ರಸ್ತರಿಗೆ ಎರಡು ಟ್ರಕ್ಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ರವಾನಿಸಿ ಮಾತನಾಡಿದರು.
ಕಳೆದ ಕೆಲ ದಿನಗಳಲ್ಲಿ ಸುರಿದ ವರುಣನ ರೌದ್ರಾವತಾರಕ್ಕೆ ಉತ್ತರ ಕನರ್ಾಟಕ ಅಕ್ಷರಸಃ ನಲುಗಿ ಹೋಗಿದೆ.ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು ನೂರಾರು ಜನ ಪ್ರಾಣ ಕಳೆದು ಕೊಂಡಿದ್ದಾರೆ ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ನೆರೆ ಸಂತ್ರಸ್ತರಿಗೆ ನೆರವಿಗೆ ಮುಂದಾಗಬೇಕಿದೆ ಅಂದಾಗಮಾತ್ರ ನೋವಲ್ಲಿರುವ ಜನರ ಕಣ್ಣೀರು ಒರೆಸಲು ಸಾಧ್ಯ ಎಂದರು.
ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ತಾಲೂಕಿನ ಜನತೆ ಎಲ್ಲರ ನೋವಿಗೆ ಮಿಡಿ ಯುವವರಾಗಿದ್ದು ಈ ಹಿಂದೆ ಕೊಡಗು, ಕೆರಳದಲ್ಲಿ ಸುರಿದ ಮಹಾ ಮಳೆಗೆ ಜನರು ಸಿಲುಕಿದ್ದಾಗ ನೆರವಿಗೆ ಬಂದು ಸಾಕಷ್ಟು ಸಹಾಯ ಮಾಡಿದ್ದಾರೆ ಇದೀಗ ಉತ್ತರ ಕನರ್ಾಟಕದ ಜನತೆಯ ಸಹಾಯಕ್ಕೆ ಬಂದಿದ್ದು ಆಹಾರ ಉತ್ಪನ್ನ ಔಷಧಿ ಬಟ್ಟೆ, ದಿನಬಳಕೆ ವಸ್ತುಗಳನ್ನು ನೀಡಿದ್ದು ಮಾನವೀಯತೆಗೆ ಸಾವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.
ರೈತ ಮುಖಂಡರಾದ ಮಲ್ಲಿಕಾಜರ್ುನ ಬಳ್ಳಾರಿ, ಕಿರಣ ಗಡಿಗೋಳ, ಪುರಸಭೆ ಸದಸ್ಯರಾದ ಬಸವರಾಜ ಛತ್ರದ, ಈರಣ್ಣ ಬಣಕಾರ, ಪಿಎಲ್ಡಿ ಬ್ಯಾಂಕ ಅಧ್ಯಕ್ಷ ಶಿವ ಯೋಗಿ ಶೀರೂರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ, ಮಲ್ಲೇಶಪ್ಪ ಬಣ ಕಾರ, ಜಗದೀಶ ಗೌಡ ಪಾಟೀಲ, ಪಾಂಡುರಂಗ ಸುತಾರ, ಬಸವರಾಜ ಹಾವನೂರ, ಸೇರಿ ದಂತೆ ಇನ್ನಿತರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 