ಹಳೇ ವಿದ್ಯಾರ್ಥಿಗಳಿಂದ ಗುರು ವಂದನಾ ಕಾರ್ಯಕ್ರಮ

ಗದಗ ಫೆ.8 : 1991 ರಿಂದ 1994 ನೇ ಸಾಲಿನ ಹಳೇ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಗುರು ವಂದನಾ ಕಾರ್ಯಕ್ರಮ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮವು ಸೋಮುವಾರ ನಗರದ ಛತ್ರಿಪತಿ ಭವನದಲ್ಲಿ ಹಮ್ಮಿಕೊಳ್ಳಲಾಯಿತು. 

ಸಾನಿಧ್ಯ ವಹಿಸಿದ್ದ ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿದರು.. ಅಧ್ಯಕ್ಷತೆಯನ್ನು ಪ್ರಾಚಾರ್ಯರು ಪ್ರೋ.ಅನೀಲ ವೈದ್ಯ, ಮುಖ್ಯ ಅತಿಥಿಗಳಾಗಿ ನಿವೃತ್ತ  ಮುಖ್ಯೋಪಾಧ್ಯಾಯ ಪಿಎಚ್ ಹಂಡಿ, ನಿವೃತ್ತ ಶಿಕ್ಷಕರಾದ ಎಸ್.ವಾಯ್. ಗೋಣ್ಣೇಪ್ಪನವರ, ಝೆಡ್.ಎಮ್ ನವಲಗುಂದ, ಸಿ.ಡಿ.ಹೋನಣ್ಣವರ ಮತ್ತು ಜಾಲಣ್ಣವರ ಉಪಸ್ಥಿತರಿದ್ದರು.