ತೆರೆದ ಕೊಳವೆ ಬಾವಿ ಮುಚ್ಚಲು ಒತ್ತಾಯ

ಕೊಪ್ಪಳ 05: ತಾಲೂಕಿನ ಕಿನ್ನಾಳ ಗ್ರಾಮದ ಬಸ್ ನಿಲ್ದಾಣದ ಕಾಂಪೌಂಡ್ ಗೋಡೆ ಬಳಿ ಹೊಸಮನಿ ಕಾಲೋನಿ ಹತ್ತಿರ ತೆರೆದ ಕೊಳವೆ ಬಾವಿ ಇದ್ದು ಸಂಬಂಧಿಸಿದವರು ಕೂಡಲೇ ಅದು ಮುಚ್ಚುವುದು ಸೂಕ್ತ, ಅಥವಾ ಗ್ರಾಮ ಪಂಚಾಯಿತಿಯವರು ಕೂಡಲೇ ಕಾರ್ಯಪ್ರವರ್ತರಾಗಿ ಕೊಳವೆ ಬಾವಿ ಮುಚ್ಚುವ ಕೆಲಸ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಿನ್ನಾಳ ಗ್ರಾಮವು ಬರುವ ದಿನಗಳಲ್ಲಿ ಮಾದರಿ ಗ್ರಾಮವಾಗಿ ಪರಿವರ್ತನೆ ಗೊಳ್ಳಲಿದೆ ಇದು ಎಲ್ಲಡೆ ಸಂತಸ ಉಂಟು ಮಾಡಿದೆ ಇಂತಹ ಗ್ರಾಮದಲ್ಲಿ ಯಾವುದೇ ಅನಾಹುತ ಜರಗುವದು ಬೇಡ, ಮುಂಜಾಗ್ರತ ಕ್ರಮ ವಾಗಿ ಕೂಡಲೇ ತೆರೆದ ಕೊಳವೆ ಬಾವಿ ಮುಚ್ಚುವುದು ಸೂಕ್ತ ಎಂಬ ಅಭಿಪ್ರಾಯ ಜನರದ್ದಾಗಿದೆ, ಸದರಿ ಕೊಳವೆಬಾವಿ ಸ್ಥಿಗಿತ ಗೊಂಡಿರಬಹುದು ಆದರೂ ಮುನ್ನೆಚ್ಚರಿಕೆ ವಹಿಸಿ ಅದು ಮುಚ್ಚುವದು ಸೂಕ್ತ ಎಂಬ ಅಭಿಪ್ರಾಯ ಜನ ವ್ಯಕ್ತಪಡಿಸಿದ್ದಾರೆ.