ಭೀಕರ ರಸ್ತೆ ಅಪಘಾತ; ತುಂಡಾದ ಬೈಕ ಸವಾರನ ದೇಹ

ರಾಣೇಬೆನ್ನೂರ  6 : ವೇಗವಾಗಿ ಚಲಾಯಿಸುತ್ತಿದ್ದ ಟಿಪ್ಪರ ವಾಹನದ ಕೆಳಗಡೆ ಸಿಲುಕಿದ ಪರಿಣಾಮ ಬೈಕ ಸವಾರನ ದೇಹ ಎರಡು ತುಂಡುಗಳಾದ ಹೃದಯವಿದ್ರಾವಕ ಘಟನೆ  ನಗರದ ನೀರೀಕ್ಷಣ ಮಂದಿರದ ಬಳಿ ಹೆದ್ದಾರಿಯಲ್ಲಿ ಇತ್ತೀಚೆಗೆ  ನಡೆದಿದೆ.  ಮೃತ ವ್ಯಕ್ತಿಯನ್ನು ಸಿದ್ದಾರೂಢ ನಗರದ ನಿವಾಸಿ ನಾಗರಾಜ ಮುಧೋಳಮಠ (60) ಎಂದು ಗುರುತಿಸಲಾಗಿದೆ.  

ಈತನು ಬೈಕ್ ಮೂಲಕ ರಸ್ತೆ ಕ್ರಾಸ್ ಮಾಡುವಾಗ ಈ ಘಟನೆ ನಡೆದಿದೆ.   ಟಿಪ್ಪರ ವಾಹನ ಸ್ಪೀಡ್ ಇದ್ದ ಕಾರಣ ಹಿಂದಿನ ಗಾಲಿಯಲ್ಲಿ ಸವಾರ ಬಿದ್ದು ದೇಹ ಹಾಗೂ ದೇಹದ ಭಾಗಗಳು  ಛಿದ್ರವಾಗಿವೆ. ಅಪಘಾತದ ತೀವೃತೆಗೆ ದೇಹವು ಚಪ್ಪಡಿಯಂತಾಗಿ ಮಾಂಸ ಮುದ್ದೆಯಂತಾಗಿತ್ತು.ಭೀಕರ ಅಪಘಾತದ ದೃಶ್ಯ ನೋಡಲು ಜನಸಂದಣಿಯೇ ಸೇರಿ ಮಮ್ಮಲ ಮರಗಿದರು.ಸ್ಥಳಕ್ಕೆ ಡಿಎಸ್ಪಿ ಡಾ.ಗೀರೀಶ ಬೋಜಣ್ಣನವರ, ಸಿಪಿಐ ಡಾ.ಶಂಕರ ಹಾಗೂ ಸಂಚಾರ ಪೋಲಿಸರು ಆಗಮಿಸಿ ಪರೀಶೀಲನೆ ನಡೆಸಿದರು.