ಉತ್ತಮ ಮಳೆ ಚುರುಕುಗೊಂಡ ಕೃಷಿ ಚಟುವಟಿಕೆ

ಉತ್ತಮ ಮಳೆ ಚುರುಕುಗೊಂಡ ಕೃಷಿ ಚಟುವಟಿಕೆ  Good rains boost agricultural activity

ಲಕ್ಷ್ಮೇಶ್ವರ 16 : " ಭೂಮಿ ತಾಯಿಯನ್ನು ನಂಬಿರುವ ರೈತರು ಕೃಷಿಯಿಂದ ಎಷ್ಟೇ ಕಷ್ಟ ಸುಖ ಬರಲಿ ಕೃಷಿಯನ್ನು ಮಾತ್ರ ಬಿಡುವುದಿಲ್ಲ ಕೃಷಿಯೇ ನಮ್ಮ ಮೂಲ ಜೀವನ ಭೂಮಿ ತಾಯಿ ನಂಬಿದವರಿಗೆ ಎಂದು ಮೋಸ ಮಾಡೋದಿಲ್ಲ ಎಂಬ ಅಪಾರ ನಂಬಿಕೆ ಅನ್ನದಾತರಲ್ಲಿ ಅದರಂತೆ ತಾಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಉತ್ತಮ ಮಳೆಯಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು ರೈತರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ ಅದರಂತೆ ತಾಲೂಕಿನ ಬಟ್ಟೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಜಮೀನು ಒಂದರಲ್ಲಿ ರೈತನೊಬ್ಬ ಟ್ಯಾಕ್ಟರ್ ಮೂಲಕ ಮುಂಗಾರು ಬೆಳೆಗಳಾದ ಹೆಸರು ಅಲಸಂದಿ ಗೋವಿನಜೋಳ ಶೇಂಗಾ ಬಿಟಿ ಹತ್ತಿ ಸೇರಿದಂತೆ ಇನ್ನಿತರೆ ಮುಂಗಾರು ಬೆಳೆಗಳ ಬಿತ್ತನೆಗೆ ಭೂಮಿಯನ್ನು ಹದ ಗೋಳಿಸುತ್ತಿರುವುದು ಕಂಡು ಬಂದಿತು ಇನ್ನೇನು ಉತ್ತಮವಾಗಿ ಮಳೆ ಆಗುತ್ತಾ ಹೋದರೆ ಸಾಕು ರೈತರು ಆ ದೇವರ ಮೇಲೆ ಭಾರ ಹಾಕಿ ಮುಂಗಾರು ಬಿತ್ತನೆಯನ್ನು ಪ್ರಾರಂಭ ಮಾಡುತ್ತಾರೆ