ಗೋಕಾಕ: ಜಾನಪದ ಮುಕ್ತ ಮಾತುಕತೆ ಕಾರ್ಯಕ್ರಮ: ಜಾನಪದ ಕಥೆಗಳಲ್ಲಿ ನಿಸರ್ಗವೂ ಕೂಡಾ ಮಾತನಾಡುತ್ತದೆ:ಕುಲಕರ್ಣಿ
ಜಾನಪದ ಕಥೆಗಳಲ್ಲಿ ನಿಸರ್ಗವೂ ಕೂಡಾ ಮಾತನಾಡುತ್ತದೆ: ಕುಲಕರ್ಣಿ
ಗೋಕಾಕ 19: ಜಾನಪದ ಸತ್ವವನ್ನು ದುಡಿಸಿಕೊಳ್ಳುವುದರೊಂದಿಗೆ ಕನ್ನಡ ಜನಪದ ಕಥೆಗಳನ್ನು ಮಾನವೀಯ ಸಂಬಂಧಗಳನ್ನು ಬೆಸೆಯುತ್ತವೆ ಎಂದು ಹಿರಿಯ ಚಿಂತಕ ವಸಂತರಾವ್ ಕುಲಕರ್ಣಿ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಜಾನಪದ ಪರಿಷತ್ತು, ಗೋಕಾಕ ತಾಲೂಕು ಘಟಕ ಜಂಟಿಯಾಗಿ ಬಸವ ನಗರದಲ್ಲಿಯ ಜಾನಪದ ತಜ್ಞ ಡಾ. ನಿಂಗಣ್ಣ ಸಣ್ಣಕ್ಕಿ ಸಭಾಭವನದಲ್ಲಿ ಶನಿವಾರ ಸಂಜೆ: 5 ಘಂಟೆಗೆ ಹಮ್ಮಿಕೊಂಡಿದ್ದ ಜಾನಪದ ಮುಕ್ತ ಮಾತುಕತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಮನುಷ್ಯ ಬದುಕಿಗೆ ಸಂದೇಶ ಸಾರುವ ಜಾನಪದ ಕಥೆಗಳಲ್ಲಿ ನಿಸರ್ಗವೂ ಕೂಡಾ ಮಾತನಾಡುತ್ತದೆ ಎಂದರು.
ವರ್ತಕ ಮಹಾಂತೇಶ ತಾಂವಶಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆಶೆಯ ಭಾಷಣ ಮಾಡಿದ ಪ್ರೊ. ಸುರೇಶ ಮುದ್ದಾರ ಇಂದಿನ ಸಾಹಿತ್ಯದ ಸೃಜನಶೀಲತೆಗಾಗಲಿ ಅಥವಾ ವೈಚಾರಿಕತೆಗೆ ಜಾನಪದವೇ ಮೂಲ ತಳಹದಿಯಾಗಿದೆ. ಹೃದಯ ವೈಶಾಲ್ಯತೆ ಮೆರೆಯುವ ಕಥೆಗಳು ಮಾನವ ಜನಾಂಗದ ಮೌಲೀಕ ವಿಚಾರವನ್ನು ಎತ್ತಿ ಹಿಡಿಯುವುದೇ ಮುಖ್ಯ ಉದ್ದೇಶವಾಗಿದೆ ಎಂದು ನುಡಿದರು. ಮಕ್ಕಳ ಸಾಹಿತಿ ಲಕ್ಷ್ಮಣ ಚೌರಿ ಕಥೆಗಾತರ್ಿ ರಜನಿ ಜೀರಗ್ಯಾಳ ಹೇಳಿದ ಕಥೆಗಳನ್ನು ಡಾ. ಸುರೇಶ ಹನಗಂಡಿ ಹಾಗೂ ಪ್ರೊ. ಮಹಾನಂದಾ ಪಾಟೀಲ ವಿಮರ್ಶ ಮಾತುಗಳನ್ನಾಡಿದರು. ನಿವೃತ್ತ ಶಿಕ್ಷಕಿ ಬಸವ್ವಾ ಯಲ್ಲಪ್ಪಾ ಕೊಳದೂರ ಇವರನ್ನು ಸನ್ಮಾನಿಸಲಾಯಿತು.
ಸೃಜನಶೀಲ ಸಾಹಿತ್ಯ ಮಹಿಳಾ ಬಳಗದ ರಾಜ್ಯ ಉಪಾಧ್ಯಕ್ಷೆ ಭಾರತಿ ಮದಭಾವಿ, ಸಿರಿಗನ್ನಡ ಮಹಿಳಾ ಬಳಗದ ತಾಲೂಕಾಧ್ಯಕ್ಷೆ ಸಂಗೀತಾ ಬನ್ನೂರ, ಕಲಾವಿದೆ ಮೋನಿಕಾ ಹಲವಾಯಿ, ಕವಿ ಈಶ್ವರ ಮಮದಾಪೂರ, ಎಂ.ಬಿ. ಪಾಟೀಲ, ಬಸವರಾಜ ಹಣುಮಂತಗೋಳ, ಬಿ.ಬಿ. ಪಟಗುಂದಿ, ಮುತ್ತೆಪ್ಪಾ ಹರಿಜನ, ಶಿವಲೀಲಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಜಾನಪದ ಪುರವಂತ ಶಿವಲಿಂಗಪ್ಪಾ ಬಾಗೇವಾಡಿ ಪ್ರಾಥರ್ಿಸಿದರು. ಪ್ರಾ. ಜಯಾನಂದ ಮಾದರ ಸ್ವಾಗತಿಸಿದರು. ಪ್ರೊ. ಯರಿಯಪ್ಪ ಬಳಗುಕರ್ಿ ನಿರೂಪಿಸಿದರು. ವಕೀಲ ಬಲದೇವ ಸಣ್ಣಕ್ಕಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 