ಶಿಕ್ಷಣ ರತ್ನ ಪ್ರಶಸ್ತಿ ಹಾಗೂ ಸೇವಾರತ್ನ ಪ್ರಶಸ್ತಿ ವಿಜೇತರಿಗೆ, ಗುರು ಮಾತೆಯರಿಗೆ ಸನ್ಮಾನ

ಹಳ್ಳೂರ, 21: ಮೂಗಳಖೋಡ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಮುಗಳಖೋಡ ಶಾಲೆಯಲ್ಲಿ  ರಾಯಬಾಗ ತಾಲೂಕು ಮಟ್ಟದ ಸಾವಿತ್ರಿಬಾಯಿ ಪುಲೆ ಪ್ರತಿಷ್ಠಾನದವರು ಕೊಡಮಾಡುವ ಶಿಕ್ಷಣ ರತ್ನ ಪ್ರಶಸ್ತಿ ವಿಜೇತ ಶಂಕರ ಮೂಡಲಗಿ ಹಾಗೂ  ಸ್ಕೌಟ್ಸ್‌ ಆ್ಯಂಡ್ ಗೈಡ್ಸ ವತಿಯಿಂದ ಕೊಡಮಾಡುವ ಸೇವಾರತ್ನ ಪ್ರಶಸ್ತಿ ವಿಜೇತ ರಾಘವೇಂದ್ರ ಸಾಗರ ಹಾಗೂ ಶಬಾನಾ ಮತ್ತೆ  ಗುರು ಮಾತೆಯರಿಗೆ ಸನ್ಮಾನ ಮಾಡಲಾಯಿತು.   

ಶಾಲೆಯ ಪ್ರಧಾನ ಗುರು ಗುರುಗಳಾದ ಎನ್ ಬಿ ಅರಭಾವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಮೂರ್ತಿಗಳಾದ ಶಂಕರ ಮೂಡಲಗಿ ಮಾತನಾಡಿ ಶ್ರದ್ಧೆಯಿಂದ ಕೆಲಸ ಮಾಡಿದರೆ ಸಾಲು ಸಾಲು ಪ್ರಶಸ್ತಿಗಳು ನಮ್ಮನ್ನು ಹಿಮ್ಮೆಟ್ಟಿಸುತ್ತವೆ ಎಂದು ಶಿಕ್ಷಕರಿಗೂ ಹಾಗೂ ಮಕ್ಕಳಿಗೂ ಕಿವಿಮಾತು ಹೇಳಿದರು.ಈ ಸಮಯದಲ್ಲಿ  ಎಸ್ ಜಿ ಮಲ್ಲಾಪುರ. ಎನ್ ಎಸ್ ಕಾಂಬಳೆ.  ಎಂ ಎಂ ಹಿರೇಮಠ್‌. ಎಂ ಎಂ ಬೆಕ್ಕೇರಿ.ಎಸ್ ಎಸ್ ಕುಲಿಗೊಡ. ದೀಪಾ ಹೊಸಟ್ಟಿ ಉಪಸ್ಥಿತರಿದ್ದರುರಾಯಬಾಗ ತಾಲೂಕಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಗೀರೀಶ್ ತಳವಾರ ನಿರೂಪಿಸಿದರು. ಶ್ರೀಶೈಲ ಕುಲಿಗೋಡ ಸ್ವಾಗತಿಸಿದರು.ಉದಯ ತಳವಾರ ವಂದಿಸಿದರು..