ಭಾವನಾತ್ಮಕ ಭಾವೈಕ್ಯತೆ ಬೆಸೆದು ಎಲ್ಲೆಡೆಯೂ ಪ್ರಜ್ವಲಿಸಿದ ದೀಪಗಳು
ಲೋಕದರ್ಶನವರದಿ
ರಾಣೇಬೆನ್ನೂರು-ಎ.5: ಕರೋನಾ ವೈರಸ್ ಮಹಾಮಾರಿ ಭೀತಿ ಎದುರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಕಳೆದ 22 ರಂದು ಸ್ವಯಂ ಗೃಹ ದಿಗ್ಭಂಧನ ವಿಧಿಸಿಕೊಳ್ಳುವಂತೆ ಆದೇಶಿಸಿ ದೇಶದ ಜನತೆಗೆ ಕರೆ ನೀಡಿದ್ದರು. ಇಡೀ ಭಾರತವೇ, ಪ್ರಧಾನಿಯವರ ಆದೇಶಕ್ಕೆ ಮನ್ನಣೆಯಿತ್ತು ಅಂದು ಸಂಪೂರ್ಣ ನಾಗರೀಕರು ಮನೆಯಿಂದ ಹೊರಬಾರದೇ, ಒಂದು ದಿವಸಗಳ ಕಾಲ ದಿಗ್ಭಂಧನ ವಿಧಿಸಿಕೊಂಡು ಮಹಾಮಾರಿಯ ವಿನಾಶಕ್ಕಾಗಿ ಪ್ರತಿಜ್ಞೆ ಮಾಡಿ ಯಶಸ್ವಿಕಂಡಿದ್ದರು.
ಇದೀಗ ಪುನ: ನರೇಂದ್ರ ಮೋದಿಜೀ ಅವರು ಭಾರತ ದೇಶವು ಸಂಪೂರ್ಣವಾಗಿ ಕರೋನಾ ವೈರಸ್ ಮಹಾಮಾರಿ ಹೊಡೆದೊಡಿಸುವ ಸಂಕಲ್ಪ ಹೊಂದಿ ರವಿವಾರ ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲ ತಮ್ಮ ತಮ್ಮ ಮನೆಯ ಬಾಗಿಲು, ಅಟ್ಟಣಿಕೆಯಲ್ಲಿ ನಿಂತು ಕುಟುಂಬ ಸಮೇತ ಸಾಲಂಕೃತ ದೀಪ ಹಚ್ಚುವ ಆದೇಶ ಹೊರಡಿಸಿರುವುದನ್ನು ಸಂಪೂರ್ಣವಾಗಿ ಸ್ವಾಗತಿಸಿರುವ ದೇಶದ ನಾಗರೀಕರು ಇಂದು ರಾತ್ರಿ ಪ್ರತಿಯೊಬ್ಬರು ಸಾಮೂಹಿಕ ದೀಪ ಬೆಳಗಿಸುವುದರ ಮೂಲಕ ಸಂಕಲ್ಪ ಸಿದ್ಧಿಗೆ ಮುಂದಾಗಿದ್ದು, ಮೋದಿಜೀ ಅವರ ಸಂಕಲ್ಪಸಿದ್ಧಿ ಮತ್ತು ದೂರದೃಷ್ಠಿತ್ವಕ್ಕೆ ಸಾಕ್ಷಿಯಾಯಿತು.
ರಾಣೇಬೆನ್ನೂರು ತಾಲೂಕು ಮತ್ತು ನಗರದಾದ್ಯಂತ ಸಾಲು-ಸಾಲು ದೀಪಗಳ ಬೆಳಕು ಯಾವುದೋ ಮಾಯಾನಗರಿಗೆ ಕರೆದುಕೊಂಡು ಸಾಗಿತ್ತು ಎನ್ನುವ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿ ಸಂಪೂರ್ಣ ಯಶಸ್ವಿ ಕಂಡಿದೆ.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 