ವಿದ್ಯುತ್ ಶಾಟರ್್ಸಕರ್ಿಟ್: 40 ಲಕ್ಷ ಮೌಲ್ಯದ ಕಬ್ಬು ಅಗ್ನಿಗೆ ಆಹುತಿ
ಉಗಾರ ಬುದ್ರುಕ ಗ್ರಾಮದಲ್ಲಿ ಏಕಕಾಲಕ್ಕೆ 40 ಎಕರ ಕಬ್ಬಿನ ಕ್ಷೇತ್ರ ಅಗ್ನಿಗೆ ಆಹುತಿಯಾಗಿರುವುದು
ಕಾಗವಾಡ 12: ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದಲ್ಲಿಯ ಕಬ್ಬಿನ ಗದ್ದೆಗೆ ವಿದ್ಯುತ್ ಶಾಟರ್್ಸಕರ್ಿಟ್ನಿಂದ ಬೆಂಕಿ ತಗುಲಿ 40 ಎಕರ ಕ್ಷೇತ್ರದಲ್ಲಿಯ ಸುಮಾರು 40 ಲಕ್ಷ ಮೌಲ್ಯದ ಕಬ್ಬು ಅಗ್ನಿಗೆ ಆಹುತಿಯಾಗಿರುವ ಘಟಣೆ ಸಂಭವಿಸಿದೆ.
ಸೋಮವಾರ ಸಂಜೆ ಉಗಾರ ಬುದ್ರುಕ ಗ್ರಾಮದ ಪ್ರವೀಣ ಹೋಸುರೆ ರೈತನ ಕಬ್ಬಿನ ಗದ್ದೆಯಲ್ಲಿಯ ಟ್ಯಾನ್ಸಫರ್ಮರ್ ಶಾಟರ್್ಸಕರ್ಿಟ್ದಿಂದ ಅಗ್ನಿ ಸ್ಪರ್ಶವಾಯಿತು. ಅದರ ಪಕ್ಕದಲ್ಲಿರುವ ಕುಮಾರ ನಿಡಗುಂದೆ ಇವರ 7 ಎಕರ, ರಾಹುಲ ಶಹಾ, ವಿವೇಕ ಶಹಾ 22 ಎಕರ, ದೀಪಚಂದ ಶಹಾ 5 ಎಕರ, ಮನಿಷ ಶಹಾ ಹೀಗೆ 40 ಎಕರ ಕ್ಷೇತ್ರ ಅಗ್ನಿಗೆ ಆಹುತಿಯಾಗಿದೆ.
ಘಟನಾ ಸ್ಥಳಕ್ಕೆ ಹೆಸ್ಕಾಂ ಇಲಾಖೆಯ ಅಧಿಕಾರಿ ಎ.ಬಿ.ರಾಠೋಡ್, ಕಂದಾಯ ನಿದರ್ೇಶಕ ಬಿ.ಬಿ.ಬೋರಗಲ, ಪೊಲೀಸ್ ಇಲಾಖೆ ಸಿಬ್ಬಂದಿ ಭೇಟಿನೀಡಿ ಪಂಚನಾಮೆ ಮಾಡಿದ್ದಾರೆ.
ಸಂಪೂರ್ಣ ವರ್ಷ ಕಬ್ಬು ಬೆಳೆ ಬೆಳೆಸಲು ಶ್ರಮಿಸಿದ ರೈತರ ಕಣ್ಣು ಮುಂದೆ ಕಬ್ಬು ಅಗ್ನಿಯಲ್ಲಿ ಆಹುತಿಯಾಗಿತ್ತಿರುವದನ್ನು ಕಂಡು ಕಣ್ಣೀರಿಟ್ಟರು. ಹೆಸ್ಕಾಂ ಇಲಾಖೆ ಮುಖ್ಯ ಅಧಿಕಾರಿಗಳು ಗಮನ ಹರಿಸಿ ರೈತರಿಗೆ ಆಗಿರುವ ಹಾನಿ ಭರಿಸಬೇಕೆಂದು ರೈತರ ಅಪೇಕ್ಷೆಯಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 