ವಿದ್ಯುತ್ ಶಾಟರ್್ಸಕರ್ಿಟ್: 40 ಲಕ್ಷ ಮೌಲ್ಯದ ಕಬ್ಬು ಅಗ್ನಿಗೆ ಆಹುತಿ
ಉಗಾರ ಬುದ್ರುಕ ಗ್ರಾಮದಲ್ಲಿ ಏಕಕಾಲಕ್ಕೆ 40 ಎಕರ ಕಬ್ಬಿನ ಕ್ಷೇತ್ರ ಅಗ್ನಿಗೆ ಆಹುತಿಯಾಗಿರುವುದು
ಕಾಗವಾಡ 12: ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದಲ್ಲಿಯ ಕಬ್ಬಿನ ಗದ್ದೆಗೆ ವಿದ್ಯುತ್ ಶಾಟರ್್ಸಕರ್ಿಟ್ನಿಂದ ಬೆಂಕಿ ತಗುಲಿ 40 ಎಕರ ಕ್ಷೇತ್ರದಲ್ಲಿಯ ಸುಮಾರು 40 ಲಕ್ಷ ಮೌಲ್ಯದ ಕಬ್ಬು ಅಗ್ನಿಗೆ ಆಹುತಿಯಾಗಿರುವ ಘಟಣೆ ಸಂಭವಿಸಿದೆ.
ಸೋಮವಾರ ಸಂಜೆ ಉಗಾರ ಬುದ್ರುಕ ಗ್ರಾಮದ ಪ್ರವೀಣ ಹೋಸುರೆ ರೈತನ ಕಬ್ಬಿನ ಗದ್ದೆಯಲ್ಲಿಯ ಟ್ಯಾನ್ಸಫರ್ಮರ್ ಶಾಟರ್್ಸಕರ್ಿಟ್ದಿಂದ ಅಗ್ನಿ ಸ್ಪರ್ಶವಾಯಿತು. ಅದರ ಪಕ್ಕದಲ್ಲಿರುವ ಕುಮಾರ ನಿಡಗುಂದೆ ಇವರ 7 ಎಕರ, ರಾಹುಲ ಶಹಾ, ವಿವೇಕ ಶಹಾ 22 ಎಕರ, ದೀಪಚಂದ ಶಹಾ 5 ಎಕರ, ಮನಿಷ ಶಹಾ ಹೀಗೆ 40 ಎಕರ ಕ್ಷೇತ್ರ ಅಗ್ನಿಗೆ ಆಹುತಿಯಾಗಿದೆ.
ಘಟನಾ ಸ್ಥಳಕ್ಕೆ ಹೆಸ್ಕಾಂ ಇಲಾಖೆಯ ಅಧಿಕಾರಿ ಎ.ಬಿ.ರಾಠೋಡ್, ಕಂದಾಯ ನಿದರ್ೇಶಕ ಬಿ.ಬಿ.ಬೋರಗಲ, ಪೊಲೀಸ್ ಇಲಾಖೆ ಸಿಬ್ಬಂದಿ ಭೇಟಿನೀಡಿ ಪಂಚನಾಮೆ ಮಾಡಿದ್ದಾರೆ.
ಸಂಪೂರ್ಣ ವರ್ಷ ಕಬ್ಬು ಬೆಳೆ ಬೆಳೆಸಲು ಶ್ರಮಿಸಿದ ರೈತರ ಕಣ್ಣು ಮುಂದೆ ಕಬ್ಬು ಅಗ್ನಿಯಲ್ಲಿ ಆಹುತಿಯಾಗಿತ್ತಿರುವದನ್ನು ಕಂಡು ಕಣ್ಣೀರಿಟ್ಟರು. ಹೆಸ್ಕಾಂ ಇಲಾಖೆ ಮುಖ್ಯ ಅಧಿಕಾರಿಗಳು ಗಮನ ಹರಿಸಿ ರೈತರಿಗೆ ಆಗಿರುವ ಹಾನಿ ಭರಿಸಬೇಕೆಂದು ರೈತರ ಅಪೇಕ್ಷೆಯಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 