ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದರು ಡಾ.ಮಾತೆ ಮಾದೇವಿ: .ಡಾ.ಲತಾ ಮುಳ್ಳೂರ

Dr. Mother Madevi embodied human values: Dr. Latha Mullura

ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದರು ಡಾ.ಮಾತೆ ಮಾದೇವಿ: .ಡಾ.ಲತಾ ಮುಳ್ಳೂರ 

ಧಾರವಾಡ 17: ಮಹಾಜಗದ್ಗುರು ಡಾ.ಮಾತೆ ಮಹಾದೇವಿಯವರು ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕವಾಗಿ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದರು. ಬಸವತತ್ವಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು ಎಂದು ನವದೆಹಲಿ ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ ರಾಷ್ಟ್ರೀಯ ಅಧ್ಯಕ್ಷೆ ಡಾ.ಲತಾ ಎಸ್ ಮುಳ್ಳೂರ ಹೇಳಿದರು. 

ಅವರು ಧಾರವಾಡದಲ್ಲಿ ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕ ಹಮ್ಮಿಕೊಂಡ ವಿಶ್ವದ ಪ್ರಥಮ ಮಹಿಳಾ ಮಹಾ ಜಗದ್ಗುರು ಲಿಂಗೈಕ್ಯ ಡಾ.ಮಾತೆ ಮಾದೇವಿಯವರ 79ನೇ ವರ್ಧಂತಿ ಹಾಗೂ ಆರನೆಯ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಜಗದ್ಗುರುಗಳಾಗಿ ಸಾಮಾಜಿಕವಾಗಿ ಅನೇಕ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದವರು ಮಾತಾಜಿ.  

ಚಿನ್ಮೂಲಾದ್ರಿಯ ಚಿತ್ಕಳೆಯಾದ ಡಾ. ಮಾತೆ ಮಹಾದೇವಿಯವರು ಜನಿಸಿದ್ದು ಚಿತ್ರದುರ್ಗದ ಸಾಸಲಟ್ಟಿಯ ಶರಣೆ ಗಂಗಮ್ಮ ಡಾ. ಎಸ್‌.ಆರ್ ಬಸಪ್ಪನವರ ಚಿದ್ಗರ್ಭದಲ್ಲಿ ದಿ. 13-03-1946ರಂದು. ಅವರ ಜನ್ಮ ಚಿಕ್ಕ ವಯಸ್ಸಿನಲ್ಲಿ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮೀಜಿಯವರಿಂದ ಲಿಂಗದೀಕ್ಷೆ ಮತ್ತು ಜಂಗಮ ದೀಕ್ಷೆ ಪಡೆದು ಮಾತೆ ಮಹಾದೇವಿ ಎಂಬ ನಾಮದೊಂದಿಗೆ ವಿಶ್ವಕ್ಕೆ ಪರಿಚಿತರಾದರು.  

ಮಾತಾಜಿಯವರು, ಶ್ರೇಷ್ಠ ಸಾಹಿತಿ, ಸಂಶೋಧಕಿ, ಕವಿಯತ್ರಿ, ಲೇಖಕರಲ್ಲದೆ, ಉತ್ತಮ ವಾಗ್ಮಿಗಳಾಗಿದ್ದರು. ಮಾತಾಜಿಯವರು. ಹುಟ್ಟು ಹೋರಾಟಗಾರರಾಗಿದ್ದ ಅವರು, 12ನೇ ಶತಮಾನದಲ್ಲಿ ಧರ್ಮ ಗುರು ಬಸವಣ್ಣನವರು ಸಂಸ್ಥಾಪಿಸಿ ಕೊಟ್ಟ ಲಿಂಗಾಯತ ಧರ್ಮದ ಪುನುರುತ್ಥಾನಕ್ಕಾಗಿ ವಚನ ಸಾಹಿತ್ಯವನ್ನ ಆಳವಾಗಿ ಆಧ್ಯಯನಿಸಿ ಸಮಾಜದಲ್ಲಿ ಬಸವತತ್ತ್ವ ಜಾರಿಗೆ ತರಲು ಪ್ರಯತ್ನಿಸಿದವರು ಎಂದರು. 

ಸಾನಿಧ್ಯವನ್ನು ಜಗದ್ಗುರು ಮಾತೇ ಜ್ಞಾನೇಶ್ವರಿಯವರು. ಜಗಜ್ಯೋತಿ ಬಸವೇಶ್ವರ ಹಾಗೂ ಜಗದ್ಗುರು ಮಾತೆ ಮಾದೇವಿಯವರ ಭಾವಚಿತ್ರದ ಪೂಜೆ ಸಲ್ಲಿಸಿ ನಮನ ಸಲ್ಲಿಸಲಾಯಿತು. 

 ನಂತರ ಬಸವ ಧರ್ಮದ ಧ್ವಜಾರೋಹಣವನ್ನು ರಾಜಶೇಖರ್ ಸೌವದತ್ತಿ ಹಿರಿಯ ನ್ಯಾಯವಾದಿಗಳು ನೆರವೇರಿಸಿ ಮಾತನಾಡಿದರು. ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪೂಜಾ ಸವದತ್ತಿ. ಜಿಲ್ಲಾಧ್ಯಕ್ಷರು ರಾಷ್ಟ್ರೀಯ ಬಸವ ದಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಬಸವರಾಜ ಆನೆಗುಂದಿ, ಪ್ರಧಾನ ಕಾರ್ಯದರ್ಶಿ ಅಜಯ್ ಆರ್ ಚೌಹಾನ್, ಉಪಾಧ್ಯಕ್ಷರಾದ ಪರಮೇಶ್ವರ್ ಕೆಂಗಾರ್‌. ಸಂತೋಷ್ ಬಡಿಗೇರ್ ಕೋಶಾಧ್ಯಕ್ಷರು ಜಿಲ್ಲಾ ಘಟಕದ ಪದಾಧಿಕಾರಿಗಳಾದ ಪದ್ಮಾವತಿ ಕಮ್ಮಾರ್ ಪಾಟೀಲ್ ರಮಾನಂದ ಕಮ್ಮಾರ್ ಬಸವರಾಜ್ ಸತ್ಯಣ್ಣನವರ್, ಅಶೋಕ್ ಶೆಟ್ಟರ್, ಚಂದ್ರಶೇಖರ್ ಹಿರೇಮಠ, ರಾಜಶೇಖರ್ ಸಂಗಣ್ಣನವರ್ ಭಾಗವಹಿಸಿದ್ದರು.