ಬಿರುಗಾಳಿ ಮಳೆಗೆ ನೆಲಕಚ್ಚಿದ ಹತ್ತಾರು ಎಕರೆ ಬಾಳೆ ಬೆಳೆ
Dozens of acres of banana crop destroyed by torrential rain
ಕೊಲ್ಹಾರ 16: ತಾಲ್ಲೂಕಿನ ಮಸೂತಿ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಬಿರುಗಾಳಿ ಮಳೆಯಿಂದ ರೈತರು ಬೆಳೆದ ಹತ್ತಾರು ಎಕರೆ ಬಾಳೆ ನೆಲಕಚ್ಚಿದೆ ರೈತರ ಆಕ್ರಂದನ ಹೇಳುತ್ತೀರದಾಗಿದೆ. ಮಸೂತಿ ಗ್ರಾಮದಲ್ಲಿ ಬಾಳೆ ಬೆಳೆದ ರೈತ ಮಂಜುನಾಥ ಚನಗೊಂಡ ಎರಡು ಎಕರೆ, ಶ್ರೀಶೈಲ ಹಂಗರಗಿ, ಈರಣ್ಣ ಗಿಡ್ಡಪ್ಪಗೋಳ ಮೂರು ಎಕರೆ, ಚೆನ್ನಪ್ಪ ಬಿಸ್ಟಗೊಂಡ ಒಂದು ಎಕರೆ,ಕಲ್ಲೇಶ ಬಾಗಾನರ ಹಾಗೂ ಇನ್ನೂ ಹಲವು ರೈತರ ಸುಮಾರು ಹತ್ತಾರು ಎಕರೆ ಬಾಳೆ ನೆಲಕಚ್ಚಿದೆ. ಇಂತಹ ಬೇಸಿಗೆ ಕಾಲದಲ್ಲಿ ಬಾಳೆ ಬೆಳೆ ಉಳಿಸಿಕೊಳ್ಳಲು ರೈತರು ಹಣ ಖರ್ಚು ಮಾಡಿ ಬೋರ್ ವೇಲ್, ಬಾವಿ ತೆಗೆಸಿ ನೀರು ಪಡೆದು ಉತ್ತಮ ಗುಣಮಟ್ಟದ ಬಾಳೆ ಇನ್ನೇನು ಫಲ ಕೈಗೆ ಸಿಗುವ ಸಂದರ್ಭದಲ್ಲಿ ಬಿರುಗಾಳಿ ಮಳೆಯಿಂದ ರೈತರ ಬದುಕು ನುಚ್ಚು ನೂರಾಯಿತು ಎಂದು ರೈತರು ತಮ್ಮ ಅಳಿಲನ್ನು ತೋಡಿಕೊಂಡರು. ಎಲ್ಲಾ ರೈತರು ನಮಗೆ ಸರ್ಕಾರದಿಂದ ಸಹಾಯ ಸಹಕಾರ ಬೇಕು ಈಗ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ಮಾಡಿದ್ದಾರೆ ಆದರೆ ಸರ್ಕಾರ ಬೇಗನೆ ನಮ್ಮ ನೋವಿಗೆ ಸ್ಪಂದಿಸುವ ಕೆಲಸ ಆಗಬೇಕು ಎಂದು ಎಲ್ಲಾ ರೈತರು ಒಕ್ಕೂರಲಿನಿಂದ ಹೇಳಿದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 