ಜಿಲ್ಲಾಮಟ್ಟದ ಹಾರ್ಡ್ ಬಾಲ್ ಪಂದ್ಯಾವಳಿ: ವಕೀಲರ ತಂಡಕ್ಕೆ ಭರ್ಜರಿ ಜಯ
ರಾಣೇಬೆನ್ನೂರು16: ಹಾವೇರಿ ನಗರದಲ್ಲಿ ಜಿಲ್ಲಾಮಟ್ಟದ ವಕೀಲರ ಹಾರ್ಡ್ ಟೆನ್ನಿಸ್ ಬಾಲ್ ಕ್ರೀಡಾಕೂಟವು ರವಿವಾರ ನಡೆಯಿತು. ಧಾರವಾಡ, ಶಿರಸಿ ಹಾಗೂ ಬ್ಯಾಡಗಿ ತಂಡಗಳ ಮೇಲೆ ಭರ್ಜರಿ ಗೆಲುವನ್ನು ಸಾಧಿಸಿದ ರಾಣೇಬೆನ್ನೂರು ವಕೀಲರ ಕ್ರಿಕೆಟ್ ತಂಡವು ಎಂದಿನಂತೆ ಚಾಂಪಿಯನ್ಶಿಪ್ ಪಟ್ಟವನ್ನು ಉಳಿಸಿಕೊಂಡು ಸಾಧನೆ ಮೆರೆದಿದೆ. ಅಂತಿಮ ಪಂದ್ಯದಲ್ಲಿ ಹಾವೇರಿ ವಕೀಲರ ತಂಡದ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿ ನಗದು ಮೊತ್ತ 10 ಸಾವಿರ ಹಾಗೂ ಆಕರ್ಷಕ ಪಾರಿತೋಷಕ ತನ್ನದಾಗಿಸಿಕೊಂಡು ಸಂಭ್ರಮಿಸಿದೆ.
ಮಂಜುನಾಥ ಹೆಚ್.ಗೌಳಿ ನಾಯಕತ್ವದ ತಂಡದಲ್ಲಿ ದಿಲೀಪ್ ಮೊಟೇಬೆನ್ನೂರು ಶಶಿಧರ ಕುಬಸದ, ಪ್ರಕಾಶ್ ಹೆಚ್.ಆರ್. ಆನಂದ ಹೆಚ್. ವಿಠಲ್ ವ್ಹಿ.ಪಿ. ಪ್ರಕಾಶ್ ಎಸ್. ದೀಲಿಪ್ ಎಚ್., ನಟರಾಜ ಜಿ.ಎಸ್., ಬಸನಗೌಡ ಹುಲ್ಮನಿ, ಹೆಚ್.ಸಂದೀಪ್, ಹನುಮಂತ ಹೆಚ್.ವಿ., ಹಾಗೂ ಸೂರ್ಯಕಾಂತ ಕೆ.ಬಿ. ಸಾಧನೆ ಮೆರೆದ ಕ್ರೀಡಾಪಟುಗಳಾಗಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 