ಲಾರಿಗೆ ಕಾರು ಡಿಕ್ಕಿ: 6 ಜನ ದುರ್ಮರಣ: ಇಬ್ಬರಿಗೆ ಗಂಭೀರ ಗಾಯ
Car collides with lorry: 6 dead, two seriously injured
ಬ್ಯಾಡಗಿ 09: ತಾಲೂಕಿನ ಮೊಟ್ಟೆ ಬೆನ್ನೂರು ಗ್ರಾಮದ ಕೋಟೆ ಆಂಜನೇಯ ಗುಡ್ಡದ ಹತ್ತಿರ ಪುನಾ ಬೆಂಗಳೂರು ಎನ್ ಎಚ್ 4 ರಸ್ತೆಯಲ್ಲಿ ಹರಿಹರದಿಂದ ರಾಕ್ ಗಾರ್ಡನ್ ಸ್ಥಳಕ್ಕೆ ಹೋಗುತ್ತಿದ್ದ ಆಡಿ ಕಾರ್ ಹೊರಟಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿ ಸ್ಥಳದಲ್ಲಿಯೇ ಕಾರಿನಲ್ಲಿದ್ದ ಆರು ಮಂದಿ ದುರ್ಮರಣಕ್ಕೆ ಈಡಾಗಿದ್ದಾರೆ.
ಇಬ್ಬರು ಗಂಭೀರವಾಗಿ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತಪಟ್ಟಿವರು ಸೈಯದ್ ಫರಾನ್ ಇನಾಮುಲ್ಲಾ ವಯಸ್ಸು 20 ವರ್ಷ ಸಾ.ಹರಿಹರಉಮ್ಮಯಿರಾ ಸೈಯದ್ ಇನಾಮುಲ್ಲಾ ವಯಸ್ಸು 11 ವರ್ಷ ಸಾ. ಹರಿಹರ. ಅಲೀಷ ಅಕ್ಬರ್ ನಾರಂಗಿ ವಯಸ್ಸು 22 ವರ್ಷ ಸಾ.ಮಾಪಸಾ ಗೋವಾ ರಾಜ್ಯ ಪುರಖಾನ್ ಅಕ್ಬರ್ ನಾರಂಗಿ ವಯಸ್ಸು 14 ವರ್ಷ ಸಾ.ಮಾಪಸಾ ಗೋವಾ ರಾಜ್ಯ. ಉಮ್ಮಿಶೀಫಾ ಅಕ್ಬರ್ ಉದಗಟ್ಟಿ ವಯಸ್ಸು 13 ವರ್ಷ ಸಾ.ರಾಣೇಬೆನ್ನೂರ. ಆಶೀಯಾ ಕಲಂದರ್ 12 ವರ್ಷ ಸಾ.ಧಾರವಾಡ.ಗಾಯಗೊಂಡವರು ಮೇಹಕ್ ತಂದೆ ರಶೀದ್ ನಾರಂಗಿ 16 ವರ್ಷ ಸಾ.ಗೋವಾ, ಉಮ್ಮಿ ಟಸ್ಕಿನ್ ಅಪ್ರೋಚ್ ಉದಗಟ್ಟಿ ವಯಸ್ಸು 11 ವರ್ಷ.ಪ್ರಕರಣವನ್ನು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 