ಇಂದು ನಡೆಯಲಿರುವ ದಹಿಂಕಾಲ ಉತ್ಸವದ ನಿಮಿತ್ತ ನಾಮಧಾರಿ ಸಮಾಜದವರಿಂದ ಬೈಕ್ ರ್ಯಾಲಿ
ಲೋಕದರ್ಶನ ವರದಿ
ಅಂಕೋಲಾ 01: ಅಂಕೋಲಾದ ವಿವಿಧ ಉತ್ಸವಗಳ ಸಾಲಿನಲ್ಲಿ ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿರುವ ನಾಮಧಾರಿ ಸಮಾಜದ ದಹಿಕಾಂಲ ಉತ್ಸವವು ಡಿ.2 ರವಿವಾರ ನಡೆಯಲಿದ್ದು, ಉತ್ಸವದ ತಯಾರಿ ಭರ್ಜ ರಿಯಾಗಿ ಸಾಗಿದೆ.
ತನ್ನಿಮಿತ್ತ ಶುಕ್ರವಾರ ಶ್ರೀ ವೆಂಕಟ್ರಮಣ ದೇವಸ್ಥಾನದ ರಥಬೀದಿಯಿಂದ ಆರಂಭಗೊಂಡ ಬೈಕ್ ರ್ಯಾಲಿಯು ಪಟ್ಟಣ ಹಾಗೂ ಗ್ರಾಮೀಣ ಭಾಗದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಮನ ಸೆಳೆಯಿತು. ನಾಮಧಾರಿ ಸಮಾ ಜದ ಮುಖಂಡ ಮಂಜುನಾಥ ಎಲ್.ನಾಯ್ಕ ಕಾಕರಮಠ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿ, ಶುಭ ಕೋರಿದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಗಜಾನನ ಆರ್.ನಾಯ್ಕ ಬೊಬ್ರುವಾಡ, ಗೌರವಾಧ್ಯಕ್ಷ ಜಯಪ್ರಕಾಶ ನಾಯ್ಕ ಕಲಭಾಗ, ಪ್ರಮುಖರಾದ ಪ್ರಕಾಶ ನಾಯ್ಕ ಲಕ್ಷ್ಮೇಶ್ವರ, ಗಣಪತಿ ನಾಯ್ಕ ಹನುಮಟ್ಟಾ, ಮುಕರ್ುಂಡಿ ನಾಯ್ಕ, ರವಿ ನಾಯ್ಕ, ನಾಗೇಶ ನಾಯ್ಕ (ಆಚಾ), ಉದಯ ನಾಯ್ಕ, ಮಂಜುನಾಥ ವಿ. ನಾಯ್ಕ, ಗಣೇಶ ನಾಯ್ಕ, ನಾಗೇಂದ್ರ ನಾಯ್ಕ, ವಿಶ್ವನಾಥ ಟಿ. ನಾಯ್ಕ, ರಾಜೇಶ ಎಂ. ನಾಯ್ಕ ತೆಂಕಣಕೇರಿ, ಗೋಪಾಲಕೃಷ್ಣ (ನಾಗೇಂದ್ರ) ನಾಯ್ಕ, ಕೃಷ್ಣ ನಾಯ್ಕ ಲಕ್ಷ್ಮೇಶ್ವರ, ದೇವಿದಾಸ ಜಾನು ನಾಯ್ಕ, ಮುಂಜುನಾಥ ನಾಯ್ಕ ಮೊರಳ್ಳಿ, ಸುರೇಶ ನಾಯ್ಕ ಅಸ್ಲಗದ್ದೆ, ಕೃಷ್ಣ ನಾಯ್ಕ ಬೊಬ್ರುವಾಡ, ಅನಿಲ ರಾಮ ನಾಯ್ಕ, ಗಜಾನನ ವಿ. ನಾಯ್ಕ, ಮಂಜುನಾಥ ಕೆ. ನಾಯ್ಕ ಬೆಳಂಬಾರ, ಸೇರಿದಂತೆ ದಹಿಂಕಾಲ ಉತ್ಸವ ಸಮಿತಿ ಸದಸ್ಯರು, ನಾಮಧಾರಿ ಸಮಾಜದ ಯುವಕರು ಪಾಲ್ಗೊಂಡಿದ್ದರು. ಪಿ.ಎಸ್.ಐ.ಗಳಾದ ಶ್ರೀಧರ ಎಸ್.ಆರ್., ಎ.ವೈ. ಕಾಂಬಳೆ ಮತ್ತು ಪೊಲೀಸ ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 