ರಾಯಬಾಗ: ಮತ್ತೆ ಕಲ್ಯಾಣ ವಿನೂತನ ಕಾರ್ಯಕ್ರಮ
ಲೋಕದರ್ಶನ ವರದಿ
ರಾಯಬಾಗ 20: ವಿಶ್ವ ಮಾನವ ಬಸವಣ್ಣನವರ ಆಶಯಗಳನ್ನು ಇಂದು ಎಲ್ಲ ಜನರಿಗೆ ಮನವರಿಕೆ ಮಾಡಿ, ಮತ್ತೆ ಕಲ್ಯಾಣ ರಾಜ್ಯ ಕಟ್ಟೋಣವೆಂದು ರಾಯಬಾಗ ಬಸವಯೋಗ ಪೀಠಾಧಿಪತಿ ಶಿವಾನಂದ ಶ್ರೀಗಳು ಹೇಳಿದರು.
ರವಿವಾರ ಸಾಯಂಕಾಲ ಪಟ್ಟಣದ ಮಹಾದೇವ ಮಂಗಲ ಕಾಯರ್ಾಲಯದಲ್ಲಿ ಬಸವಯೋಗ ಮಂದಿರ ರಾಯಬಾಗ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಷತ್ತು ತಾಲೂಕಾ ಘಟಕ ರಾಯಬಾಗ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತ್ತೆ ಕಲ್ಯಾಣ ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ಮತ, ಲಿಂಗ, ಮೇಲು, ಕೀಳು ಎಂಬ ಭೇದಭಾವವನ್ನ ತೊಡದು ಹಾಕಿ ಎಲ್ಲರನ್ನುಒಂದೆ ಸಾಲಿನಲ್ಲಿತರಲು ಪ್ರಯತ್ನಿಸಿದರು ಎಂದರು.
ಭೇಂಡವಾಡದ ರೇವಣಸಿದ್ದ ಶ್ರೀಗಳು ಮಾತನಾಡಿ, ತರಳಬಾಳು ಜಗದ್ಗುರು ಹಾಗೂ ಸಾನೆಹಳ್ಳಿಯ ಶ್ರೀಗಳು ಈಗ ಮತ್ತೆರಾಜ್ಯಾದ್ಯಂತ ಮತ್ತೆ ಕಲ್ಯಾಣ ರಾಜ್ಯಕಟ್ಟಲು ಸಂಕಲ್ಪ ಮಾಡಿದ್ದಾರೆ. ಇದಕೆ ಎಲ್ಲರೂ ಕೈಜೋಡಿಸೋಣವೆಂದು ಕರೆ ನೀಡಿದರು.
ಶಿಕ್ಷಕ ವಿರೇಶ ಪಾಟೀಲ,ಬಿ.ಆರ್.ಅಜುರೆ, ಸಾತಗೌಡ ಪಾಟೀಲ, ಅಪ್ಪಾಸಾಬ ಕುಲಗುಡೆ ಸೇರಿದಂತೆ ಶರಣಚಿಂತಕರು ಹಾಗೂ ಬಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 