ವರುಣನ ಕಣ್ಣು ಮುಚ್ಚಾಲೆ ಆಟಕ್ಕೆ ಅಡಕೆ ಬೆಳೆಗಾರರು ಕಂಗಾಲು
ವರುಣನ ಕಣ್ಣು ಮುಚ್ಚಾಲೆ ಆಟಕ್ಕೆ ಅಡಕೆ ಬೆಳೆಗಾರರು ಕಂಗಾಲು
ಲೋಕದರ್ಶನ ವರದಿ
ಮುಂಡಗೋಡ 8: ಕಳೆದ ಒಂದು ವಾರದಿಂದ ವರುಣನ ಕಣ್ಣು ಮುಚ್ಚಾಲೆ ಆಟಕ್ಕೆ ಅಡಕೆ ಬೆಳೆಗಾರರು ಕಟಾವಾದ ಅಡಕೆಯನ್ನು ಒಣಗಿಸಲಾಗದೇ ಸಂಕಷ್ಟಕ್ಕೀಡಾದ ಪರಿಸ್ಥಿತಿ ತಾಲೂಕಿನ ಬೆಡಸಗಾಂವ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಲ್ಲಿ ರೈತರ ಗೋಳು ಕೆಳುವರಾರು ಅನ್ನುವ ಹಾಗೆ ಆಗಿದೆ.
ಮಲೆನಾಡು ಪ್ರದೇಶವೆನಿಸಿಕೊಂಡಿರುವ ಬೆಡಸಗಾಂವ ಸುತ್ತಮುತ್ತಲಿನ ಹಳ್ಳಿಗಳ ರೈತರ ಪ್ರಮುಖವಾದ ಹಾಗೂ ವಾಣಿಜ್ಯ ಬೆಳೆ ಅಡಕೆಯಾಗಿದ್ದು ಈಗ ಅಡಕೆ ಬೆಳೆಯ ಕಟಾವು ನಡೆದಿದೆ. ಆದರೆ ಇದೇ ವೇಳೆ ಮಳೆ ಬೀಳಲು ಆರಂಭವಾಗಿದ್ದರಿಂದ ಅಡಕೆ ಬೆಳೆಗಾರರಿಗೆಲ್ಲ ತುಂಬಾ ತೊಂದರೆಯಾಗಿದೆ. ದಟ್ಟವಾಗಿ ಕವಿದಿರುವ ಮೋಡ ಮತ್ತು ಆಗಾಗ ಬೀಳುತ್ತಿರುವ ಮಳೆಯ ಕಾರಣದಿಂದ ಅಡಕೆ ಬೆಳೆಗಾರರಿಗೆ ಅಡಕೆಯನ್ನು ಕಟಾವು ಮಾಡಿ ಅದನ್ನು ಸುಲಿದು ಒಣಗಿಸುವುದು ಹರ ಸಾಹಸವಾಗಿದೆ.
ಅಡಕೆಯನ್ನು ಕನಿಷ್ಠ ಆರು ದಿವಸಗಳಾದರೂ ಬಿಸಿಲಲ್ಲಿ ಚೆನ್ನಾಗಿ ಒಣಗಿಸಲೇಬೇಕು. ಒಣಗಿದರೆ ಒಳ್ಳೆಯ ಗ್ರೇಡ್ ಸಿಗುತ್ತದೆ ಮತ್ತು ಉತ್ತಮ ಧಾರಣೆ ಬರುತ್ತದೆ. ಇಲ್ಲವಾದರೆ ಅಡಕೆಯು ಮುಗ್ಗು ಹಿಡಿದು ಅಡಕೆಗೆ ಉತ್ತಮ ಗ್ರೇಡ್ ಬರುವುದಿಲ್ಲ ಅದರಿಂದ ಮಾರುಕಟ್ಟೆಯಲ್ಲಿ ಒಳ್ಳೆಯ ಧಾರಣೆ ಸಿಗುವುದಿಲ್ಲ. ಸ್ವಲ್ಪ ಬಿಸಿಲು ಬೀಳುವ ವೇಳೆ ಅಡಕೆಯನ್ನು ಒಣಗಿಸಲು ಹಾಕಿದರೆ ಮತ್ತಷ್ಟು ಹೊತ್ತಿಗೆ ಮಳೆ ಬಂದು ಅಡಕೆಯನ್ನು ಮಳೆಯಿಂದ ರಕ್ಷಿಸಿಕೊಳ್ಳಬೇಕು. ಮಳೆಯಿಂದ ತುಂಬಾ ತೊಂದರೆಯಾಗಿದೆ. ಅಡಕೆ ತಯಾರು ಮಾಡಲು ಸುಲಿದ ಅಡಕೆಯೆಲ್ಲ ಮುಗ್ಗು ಬರುತ್ತಾ ಇದೆ ಎಂದು ಬೆಡಸಗಾಂವ್ನ ಮಹಾಬಲೇಶ್ವರ ಗಣಪತಿ ಭಟ್ಟ ತಮ್ಮ ನೋವನ್ನು ಪತ್ರಿಕೆಗೆ ಮಾಹೀತಿ ನೀಡಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 