ಸಂತೆಯಲ್ಲಿ ಟೊಮೆಟೊ ತಿಂದ ಕರು ವ್ಯಾಪಾರಸ್ಥನ ಹೊಡೆತದಿಂದ ಸತ್ತ ಕರು
ಸಂತೆಯಲ್ಲಿ ಟೊಮೆಟೊ ತಿಂದ ಕರು ವ್ಯಾಪಾರಸ್ಥನ ಹೊಡೆತದಿಂದ ಸತ್ತ ಕರು
ಮುಂಡಗೋಡ: ಸಂತೆಯಲ್ಲಿ ಇಟ್ಟಿದ್ದ ಟೊಮೆಟೋ ಹಣ್ಣುಗಳನ್ನು ಕರುವೊಂದು ತಿಂದಿದ್ದಕ್ಕೆ ಸಿಟ್ಟಿಗೆದ್ದ ವ್ಯಾಪಾರಸ್ಥ ಕೋಲಿನಿಂದ ಜಾನುವಾರುಗೆ ಹೊಡೆದಿದ್ದರಿಂದ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಪಟ್ಟಣದಲ್ಲಿ ನಡೆದಿದೆ.
ಸೋಮವಾರದ ಸಂತೆಯಲ್ಲಿ ದನಕರುಗಳು ಓಡಾಡುತ್ತಿರುತ್ತವೆ. ಅದರಂತೆ ಸಾಯಂಕಾದ ವೇಳೆಗೆ ಕರುವೊಂದು ಟೊಮೆಟೊ ಹಣ್ಣು ತಿಂದಿದೆ ಎಂದು ಹೇಳಲಾಗಿದ್ದು ಹಾವೇರಿ ಮೂಲದ ವ್ಯಾಪಾರಸ್ಥ ಮಾಬುಷಾ ಕೋಲಿನಿಂದ ಮನಬಂದತೆಕರುವಿಗೆ ಥಳಿಸಿದ್ದಾನೆ ಇದರಿಂದ ಸ್ಥಳದಲ್ಲೆ ಟೊಮೆಟೊ ತಿಂದ ತಪ್ಪಿಗೆ ಕರು ಅಸುನೀಗಿದೆ.
ಆಕ್ರೋಶಗೊಂಡ ಸಾರ್ವಜನಿಕರು ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡರು. ಆರೋಪಿ ಮಾಬುಷಾ ಸ್ಥಳದಲ್ಲಿ ಟೊಮೆಟೊ ಬಿಟ್ಟು ಪರಾರಿಯಾಗಿದ್ದಾನೆ. ಕರುವಿನ ಮಾಲಿಕ ಇಪರ್ಾನ ಶಿಗ್ಗಾವಿ ಹಾಗೂ ಸಾರ್ವಜನಿಕರು ಸೇರಿ ವ್ಯಾಪಾರಿ ಸಾಮಗ್ರಿ ತಂದಿದ್ದ ವಾಹನವನ್ನು ಪೊಲೀಸರಿಗೆ ಒಪ್ಪಿಸಿದರು ಟೊಮೆಟೊತಿಂದಿದ್ದಕ್ಕೆ ಮೂಕ ಪ್ರಾಣೆಯ ಜೀವ ಕಳೆದ ವ್ಯಾಪಾರಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ ಹಾಕುತ್ತಿರುವುದು ಕಂಡುಬಂದಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 