ಮೋಳೆಯಿಂದ ಶ್ರೀಶೈಲಕ್ಕೆ ಸತತ 7ನೇ ವರ್ಷದ ಪಾದಯಾತ್ರೆ..!
7th consecutive year of padayatra from Mole to Srishaila..!
ಮಲ್ಲಿಕಾರ್ಜುನನ ದರ್ಶನಕ್ಕೆ ಹೊರಟ ಭಕ್ತರಿಗೆ ಗ್ರಾಮಸ್ಥರಿಂದ ಬಿಳ್ಕೋಡುಗೆ
ಕಾಗವಾಡ 14: ತಾಲೂಕಿನ ಮೋಳೆ ಗ್ರಾಮದ ಪಾದಯಾತ್ರೆ ದಾಸೋಹ ಸಮಿತಿ ಇವರಿಂದ ಆಂದ್ರ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಸತತ 7ನೇ ವರ್ಷದ ಪಾದಯಾತ್ರೆಯ ಮುಖಾಂತರ ಗುರುವಾರ ದಿ. 13 ರಂದು ಸಂಜೆ ತೆರಳಿದರು.
ಈ ವೇಳೆ ಪಾದಯಾತ್ರಾ ಕಮೀಟಿ ಅಧ್ಯಕ್ಷ ಶ್ರೀಶೈಲ ಜಂಗಲಗಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಕೂಡ ಹೊಳಿ ಹುಣ್ಣಿಮೆಯ ದಿನದಂದು ಕಾಮಣ್ಣ ದಹನದ ನಂತರ ಮಹಾ ಮಂಗಳಾರತಿ ಮಾಡಿ, ಪಾದಯಾತ್ರೆ ಕೈಗೊಳ್ಳುತಿದ್ದು, ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಿಂದ 7ನೇ ವರ್ಷದ ಪಾದಯಾತ್ರೆ ಪ್ರಾರಂಭಗೊಳ್ಳಲಿದ್ದು, ಪ್ರತಿ ದಿನ ಸುಮಾರು 40 ರಿಂದ 50 ಕೀಮಿ ಕ್ರಮಿಸಿ, ಹದಿಮೂರು ದಿನಗಳ ನಂತರ ಶ್ರೀಶೈಲ ತಲುಪಲಿದ್ದೇವೆ. ಅಲ್ಲಿ ಐದು ದಿನಗಳ ದಾಸೋಹ ಮಾಡುತ್ತವೆ. ಪ್ರತಿವರ್ಷ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು ನೂರರಿಂದ ನೂರಾಐವತ್ತು ಜನರು ಪಾದಯಾತ್ರೆ ಮೂಲಕ ಕಂಬಿ ಹಾಗೂ ನಂದಿ ಕೋಲು ಹೊತ್ತು ತೆರಳುತ್ತೆವೆ ಎಂದು ಮಾಹಿತಿ ನೀಡಿದರು.
ಪಾದಯಾತ್ರೆ ಹೊರಟ ಭಕ್ತರು ಭಜನೆ ಮಾಡುತ್ತಾ ಪ್ರಮುಖ ಬೀದಿಗಳ ಮೂಲಕ ಸಾಗಿ ತಂಗಡಿ ರಸ್ತೆಯ ಬಳಿ ಬೀಳ್ಕೊಡಲಾಯಿತು.
ಈ ವೇಳೆ ಪಾದಯಾತ್ರೆ ಕಮೀಟಿ ಉಪಾಧ್ಯಕ್ಷ ಕುಮಾರ ತುಗಶೆಟ್ಟಿ, ಶ್ರೀಶೈಲ ಹಳ್ಳೋಳ್ಳಿ, ಶಿವಾನಂದ ಸಂಭೋಜಿ, ಮಲ್ಲಪ್ಪ ಬಡಿಗೇರ, ಬಸು ಹಳ್ಳೋಳ್ಳಿ, ಸುಭಾಷ ಪಾಟೀಲ, ಶಿವಾನಂದ ಕಡಕೋಳ, ಶಂಕರ ತೇಲಿ, ಚನ್ನಪ್ಪ ಯಾದವಾಡ, ಸಂಜು ಮಾನೆ, ಸಲಬಯ್ಯ ಹಿರೇಮಠ, ತಾತ್ಯಾಸಾಬ ಸಂಭೋಜಿ, ಕೃಷ್ಣಾ ಕೋಳೆಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 