18 ವಯೋಮಿತಿ ಸ್ಯಾಫ್ ಚಾಂಪಿಯನ್ಶಿಪ್: ಫೈನಲ್ ತಲುಪಿದ ಭಾರತ ಕಿರಿಯರು
ಕಠ್ಮಂಡು, ಸೆ 27 : ಭಾರತ ಕಿರಿಯರ ಫುಟ್ಬಾಲ್ ತಂಡ ಇಲ್ಲಿ ನಡೆಯುತ್ತಿರುವ 18 ವಯೋಮಿತಿ ಸ್ಯಾಫ್ ಚಾಂಪಿಯನ್ಶಿಪ್ ಟೂನರ್ಿಯಲ್ಲಿ ಫೈನಲ್ಗೆ ಪ್ರವೇಶ ಮಾಡಿದೆ.
ಶುಕ್ರವಾರ ನಡೆದ ಸೆಮಿಫೈನಲ್ ಕಾದಾಟದಲ್ಲಿ ನರೇಂದರ್ ಗೆಹ್ಲೋಟ್ (7ನೇ ನಿ.), ಮನ್ವೀರ್ ಸಿಂಗ್ (79ನೇ ನಿ.) ಹಾಗೂ ನಿಂಥೊಯಿಂಗನ್ಬಾ ಮೀಟೈ (81ನೇ ನಿ.) ಅವರ ಮೂರು ಗೋಲುಗಳು ಮಾಲ್ಡೀವ್ಸ್ ತಂಡದ ಅಹ್ನಾಫ್ ರಶೀಧ್ (45+1) ನೀಡಿದ ಒಂಡು ಗೋಲು ಕೊಡುಗೆಯಿಂದ ಭಾರತ ತಂಡ 4-0 ಅಂತರದಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. ಭಾನುವಾರ ನಡೆಯುವ ಫೈನಲ್ ಹಣಾಹಣಿಯಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.
ಪಂದ್ಯದ ಆರಂಭದಿಂದಲೇ ಆಕ್ರಮಣಾಕಾರಿ ಪ್ರದರ್ಶನ ತೋರಿದ ಭಾರತೆಕ್ಕೆ ನರೇಂದ್ರ್ ಗೆಹ್ಲೋಟ್ ಅವರು 7ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆದರು. ಗೆಹ್ಲೋಟ್ ಅವರು ಇಂಟರ್ಕಾಂಟಿನೆಂಟಲ್ ಹಿರಿಯ ತಂಡದಲ್ಲಿ ಗಮನ ಸೆಳೆದಿದ್ದರು. ಮೊದಲನೇ ಅವಧಿ ಮುಕ್ತಾಯೆಕ್ಕೆ ಭಾರತ 1-0 ಮುನ್ನಡೆ ಪಡೆಯಿತು. ನಂತರ ಎರಡನೇ ಅವಧಿಯ ಆರಂಭದಲ್ಲೇ ಮಾಲ್ಡೀವ್ಸ್ ತಂಡದ ಅಹ್ನಾಫ್ ರಶೀಧ್ ಭಾರತ ಗೋಲಿನ ಕೊಡುಗೆ ನೀಡಿದರು. ಇದರಿಂದ ಭಾರತ 2-0 ಮುನ್ನಡೆ ಪಡೆಯಿತು.
ಪಂದ್ಯದ ಅಂತಿಮ ಘಟ್ಟದವರೆಗೂ ಎರಡೂ ತಂಡಗಳ ನಡುವೆ ಭಾರಿ ಹೋರಾಟ ನಡೆಯಿತು. ಮನ್ವೀರ್ ಸಿಂಗ್ 79ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಹಾಗೂ 81ನೇ ನಿಮಿಷದಲ್ಲಿ ನಿಂಥೊಯಿಂಗನ್ಬಾ ಮೀಟೈ ಗಳಿಸಿದ ಗೋಲುಗಳ ಸಹಾಯದಿಂದ ಭಾರತ ನಿಗದಿತ ಅವಧಿ ವಾುುಕ್ತಾಯೆಕ್ಕೆ 4-0 ಮುನ್ನಡೆ ಗಳಿಸಿತು. ಗೋಲು ಗಳಿಸಲು ಬಾರಿ ಕಾದಾಟ ನಡೆಸಿದ ಮಾಲ್ಡೀವ್ಸ್ ತಂಡ ಭಾರತದ ರಕ್ಷಣಾ ಕೋಟೆಯನ್ನು ಬೇಧಿಸುವಲ್ಲಿ ವಿಫಲವಾಯಿತು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 