ಯುವಕರು ಗ್ರಾಮೀಣ ಕ್ರೀಡೆ ಕಲೆ ಗೌರವಿಸಲಿ: ವಿವೇಕರಾವ
ರಾಯಬಾಗ 05: ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ದೇಶದ ಗ್ರಾಮೀಣ ಕ್ರೀಡೆಗಳು, ಜಾನಪದ ಸಾಹಿತ್ಯ, ಕಲೆಗಳ ಸೊಗಡುಗಳನ್ನು ಗೌರವಿಸಿ, ಬೆಳೆಸಿ, ಮುಂದುವರಿಸಿಕೊಂಡು ಹೋಗಬೇಕೆಂದು ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಹೇಳಿದರು.
ಶುಕ್ರವಾರ ರಾಯಬಾಗ ರೈಲ್ವೆ ಸ್ಟೇಶನ್ದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ವಿವಿಧ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಕಬಡ್ಡಿ, ಖೋಖೋ, ಭಾರ ಎತ್ತುವದು, ಓಡಿ ಗುರಿ ಮಟ್ಟುವದು ಮುಂತಾದ ಗ್ರಾಮೀಣ ಕ್ರೀಡೆಗಳು ಮನುಷ್ಯನನ್ನು ಶಾರೀರಿಕವಾಗಿ ಬಲಪಡಿಸಿದರೆ ಕುದುರೆ ಸ್ಪಧರ್ೆ, ಜೋಡು ಕುದುರೆ ಗಾಡಿ ಸ್ಪಧರ್ೆಗಳು ಜಾನುವಾರಗಳ ಶಕ್ತಿ ಪ್ರದರ್ಶನದ ಪ್ರತೀಕವಾಗಿರುವದರಿಂದ ಇಂಥ ಕ್ರೀಡೆಗಳ ಆಯೋಜನೆಯಿಂದ ಜಾನುವಾರುಗಳೂ ಆರೋಗ್ಯ ಪೂರ್ಣವಾಗಿರಲು ಸಾಧ್ಯವಿದೆ ಎಂದು ಹೇಳಿದರು.
ಕುದುರೆ ಗಾಡಿ ಶರ್ಯತ್ತಿನಲ್ಲಿ ಸಾಗರ ಮೇತ್ರಿ (ಅಂಕಲಿ) ಪ್ರಥಮ, ಕಿಶೋರ ಪೂಜಾರಿ (ಪಟ್ಟಣಕಡೋಲಿ) ದ್ವಿತೀಯ, ರಾಹುಲ ಹುಗ್ಗಿ (ಶಿರೋಳ) ತೃತೀಯ ಬಹುಮಾನ ಪಡೆದರು. ಸೈಕಲ್ ಶರ್ಯತ್ತಿನಲ್ಲಿ ಬಸವರಾಜ ದಳವಾಯಿ (ಧರ್ಮಟ್ಟಿ)ಪ್ರಥಮ, ವಾಸು ಬೋರಗಾಂವ್ (ನಿಪನಾಳ)ದ್ವಿತೀಯ ಹಾಗೂ ಬಾಳಾಸಾಬ ಬಸ್ತವಾಡ (ಬೆಳಕೂಡ) ತೃತೀಯ ಬಹುಮಾನ ಪಡೆದುಕೊಂಡರು. ಜಾತ್ರೆಯ ನಿಮಿತ್ಯ ಕುದುರೆ ಓಟ ಹಾಗೂ ಕುಸ್ತಿ ಪಂದ್ಯಾಟಗಳು ಜರುಗಿದವು.
ಮಹಾವೀರ ಶೆಟ್ಟಿ, ರಾಯಪ್ಪ ಗೊಂಡೆ, ಗುಣಪಾಲ ಬಡೋರೆ, ರಮೇಶ ಕುಂಬಾರ, ಸಾತಗೌಡಾ ಪಾಟೀಲ, ಕಲ್ಲಪ್ಪ ನಾಗರಾಳೆ, ಸಂಜು ಬಾವಚೆ, ಸಂತೋಷ ತೇರದಾಳೆ, ಕುಮಾರ ಹೊಸಕೋಟೆ, ತಾನಾಜಿ ರೂಪಾಳೆ, ಬಸಗೌಡಾ ಪಾಟೀಲ, ಹಾಲಪ್ಪ ಅಳಗೂಡೆ ಹಾಗೂ ಲಕ್ಷ್ಮೀದೇವಿ ಟ್ರಸ್ಟ ಕಮೀಟಿ ಸದಸ್ಯರು, ಗ್ರಾಮಸ್ಥರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 