ಶ್ರೀ ಕೃಷ್ಣ ಉತ್ಸವದ ನಿಮಿತ್ತ ನಡೆದ ವಾಲಿಬಾಲ್ ಪಂದ್ಯಾವಳಿ
ಲೋಕದರ್ಶನ
ವರದಿ
ಅಂಕೋಲಾ 20
: ಬೋಳೆ ಹೊಸಗದ್ದೆ ಗೌಡರಕೇರಿಯಲ್ಲಿ ಶ್ರೀ ಕೃಷ್ಣ ಉತ್ಸವ
ಸಮಿತಿಯವರು ಆಯೋಜಿಸಿದ್ದ 17ನೇ ವರ್ಷದ ವಾಲಿಬಾಲ್
ಪಂದ್ಯಾವಳಿಯನ್ನು ಪುರಸಭಾ ಸದಸ್ಯ ಕಾತರ್ಿಕ ಎಸ್. ನಾಯ್ಕ ಲಕ್ಷ್ಮೇಶ್ವರ
ಇವರು ಉದ್ಘಾಟಿಸಿ ಈ ಹಿಂದಿನಿಂದಲೂ ಗ್ರಾಮೀಣ
ಭಾಗದ ಇಲ್ಲಿಯ ಜನತೆ ಹಲವು ವಿದಾಯಕ
ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದ್ದನ್ನು ಹತ್ತಿರದಿಂದ ಕಂಡಿದ್ದೇನೆ. ನನ್ನ ಅನೇಕ ಮಿತ್ರರು
ಊರ ಹಿರಿಯರ ಮಾರ್ಗದರ್ಶನದಲ್ಲಿ ಶ್ರೀ ಕೃಷ್ಣ ಉತ್ಸವದ
ನಿಮಿತ್ತ ಹಮ್ಮಿಕೊಂಡಿರುವ ವಾಲಿಬಾಲ್ ಪಂದ್ಯಾವಳಿ ಊರಿನ ಒಗ್ಗಟ್ಟಿಗೆ ಸಾಕ್ಷಿಯಾಗಿ
ಯಶಸ್ವಿಯಾಗಲಿ ಎಂದರು.
ಶಿಕ್ಷಕರು ಮತ್ತು ಹಿರಿಯ ಕ್ರೀಡಾಪಟುಗಳಾದ ಕೆ.ಜಿ.ಗೌಡ
ಬೆಳಸೆ ಇವರು ಅಧ್ಯಕ್ಷತೆ ವಹಿಸಿ
ಮಾತನಾಡಿ ಚಿಕ್ಕಂದಿನಿಂದಲೇ ಸತತ ಅಭ್ಯಾಸದ ಮೂಲಕ
ಗುರುತಿಸಿಕೊಂಡು ಸಾಧನೆ ಮಾಡಬೇಕು. ಗ್ರಾಮೀಣ ಭಾಗದಲ್ಲಿಯೂ ಹಲವು ಉತ್ತಮ ಸೌಲಭ್ಯಗಳನ್ನು
ಒದಗಿಸಿದರೆ ಉತ್ತಮ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದರು.
ಉತ್ಸವ ಸಮಿತಿಯ ಅಧ್ಯಕ್ಷ ಜೆ.ಆರ್.ರವಿ
ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ ಸದಸ್ಯ
ವಿಘ್ನೇಶ ಗೌಡ, ಮಾಜಿ ಸದಸ್ಯ
ಸೋಮೇಶ್ವರ ಗೌಡ, ನಿಣರ್ಾಯಕರಾದ ಶಂಕರ
ಗೌಡ ಅಂಬಾರಕೊಡ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾಗವಹಿಸಿದ ಒಟ್ಟೂ 8 ತಂಡಗಳಲ್ಲಿ ಅಂತಿಮವಾಗಿ ಬಾಲಗೋಪಾಲ
ಎ ತಂಡ (ಪ್ರಥಮ) ಮಾಹಾಸತಿ
ಯಂಗ್ ಬಾಯ್ಸ್ ತಂಡ (ದ್ವೀತಿಯ)
ಬಹುಮಾನ ಪಡೆದುಕೊಂಡರು. ಶ್ರೀ ಕೃಷ್ಣ ಉತ್ಸವ
ಸಮಿತಿಯ ಪದಾಧಿಕಾರಿಗಳು,ಸದಸ್ಯರು ಮತ್ತು ಊರ ನಾಗರಿಕರು ಸಹಕರಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 