ಸಿಲಿಂಡರ ಸ್ಪೋಟದ ಸಂತ್ರಸ್ತರಿಗೆ ಸಂಜಯ ಪಾಟೀಲ ಭೇಟಿ
ಲೋಕದರ್ಶನ ವರದಿ
ಬೆಳಗಾವಿ 13: ಸಿಲಿಂಡರ ಸ್ಪೋಟದಿಂದಾಗಿ ಮನೆ ಸುಟ್ಟು ಹಾನಿಗೊಳಗಾದ ಸಮೀಪದ ಗಜಪತಿ ಗ್ರಾಮದ ಸಂತ್ರಸ್ಥ ಮಾರುತಿ ರುದ್ರಪ್ಪ ಕರಡಿ ಯವರ ಮನೆಗೆ ಮಾಜಿ ಶಾಸಕ ಹಾಗೂ ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬಟ್ಟೆ, ಬ್ಲಾಂಕೇಟ ಹಾಗೂ 1 ತಿಂಗಳಿಗಾಗುವಷ್ಟು ಮನೆ ಬಳಕೆ ಹಾಗೂ ಪಡಿತರ ಸಾಮಗ್ರಿ ವಿತರಿಸಿ ಮಾತನಾಡಿ ಸರಕಾರದಿಂದ ಸಂತ್ರಸ್ಥರಿಗೆ ಮನೆ ಕಟ್ಟಿಸಿಕೊಳ್ಳಲು ಅನುದಾನ ಕೊಡಿಸುವದಾಗಿ ಭರವಸೆ ನೀಡಿದರು. ಸ್ಥಳೀಯ ಗ್ರಾಪಂ ನಿಂದ ತಾತ್ಕಾಲಿಕ ಶೆಡ್ ನಿಮರ್ಿಸಿಕೊಳ್ಳಲು ಸಂತ್ರಸ್ಥರಿಗೆ 10 ಸಾವಿರ ರೂ. ಅನುದಾನ ಕೊಡಿಸುವದಾಗಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಮಾಜಿ ಅಧ್ಯಕ್ಷ ಗಂಗಾಧರ ಘಸಾರಿ ಹೇಳಿದರು.
ರಮೇಶಗೌಡ ಪಾಟೀಲ, ಸುನೀಲ ದಳವಾಯಿ, ಸಂತೋಷ ಅಂಗಡಿ, ರಮೇಶಗೌಡ ಪಾಟೀಲ(ಮಡ್ಡಿ), ವಜ್ರಕಾಂತ ಹಿರೇಮಠ, ಮಂಜು ಧರೆನ್ನವರ, ಸಂತೋಷ ಅಂಗಡಿ, ಬಸವರಾಜ ಡಮ್ಮಣಗಿ, ರವಿ ಪಾರ್ವತಿ, ಚನಬಸ್ಸಪ್ಪಾ ಲಂಗೂಟಿ, ಭೀಮನಗೌಡ ಪಾಟೀಲ, ದುಂಡಪ್ಪ ಮೆಳೇದ ಸೇರಿದಂತೆ ಹಲವರು ಇದ್ದರು.
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ 