ರಾಮತೀರ್ಥ ನಗರದ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ತುತರ್ು ಕ್ರಮ : ಶಾಸಕ ಬೆನಕೆ
ಲೋಕದರ್ಶನ ವರದಿ
ಬೆಳಗಾವಿ 26: ದಿ.26ರಂದು ಶಾಸಕ ಅನಿಲ ಬೆನಕೆರವರು ರಾಮತೀರ್ಥ ನಗರದ 10 ವರ್ಷಗಳಿಂದ ಸರಿಯಾಗಿ ತ್ಯಾಜ್ಯ ವಸ್ತುಗಳ ವಿಲೇವಾರಿಯಾಗದ ಕೆಲಸವನ್ನು ಪೂರ್ಣಗೊಳಿಸಲು ಬುಡಾ ಅಧಿಕಾರಿಗಳ ಜೊತೆ ಸಮನ್ವಯ ಚಚರ್ೆ ನಡೆಸಿ ತ್ಯಾಜ್ಯ ವಿಲೇವಾರಿ ಮಾಡುವ ಸಮಸ್ಯೆಯನ್ನು ಬಗೆಹರಿಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆರವರು ಮಾತನಾಡಿ ರಾಮತೀರ್ಥ ನಗರದ 10 ವರ್ಷಗಳ ಸಮಸ್ಯೆಯಾದ ತ್ಯಾಜ್ಯ ವಿಲೇವಾರಿಯನ್ನು ಬುಡಾ ಅಧಿಕಾರಿಗಳು 2 ದಿನಕೊಮ್ಮೆ ಕಸ ವಿಲೇವಾರಿ ಮಾಡಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸೂಚಿಸಿದರು. ರಾಮತೀರ್ಥ ನಗರದ ರಹವಾಸಿಗಳು ಸಹ ಕಸವನ್ನು ಗಟಾರು ಹಾಗೂ ಇನ್ನಿತರೆ ಸ್ಥಳದಲ್ಲಿ ಎಸೆಯದೆ 2 ದಿನಕೊಮ್ಮೆ ಕಸವನ್ನು ಸಂಗ್ರಹಿಸಿ ಕಸವನ್ನು ಎತ್ತಲು ಮನೆ ಮನೆಗೆ ಬರುವ ವಾಹನದಲ್ಲಿ ಹಾಕಬೆಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬುಡಾ ಅಭಿಯಂತರರಾದ ಹಿರೆಮಠರವರು ರಾಮತೀರ್ಥ ನಗರದ ತ್ಯಾಜ್ಯ ವಿಲೇವಾರಿಯನ್ನು ಕೈಗೊಳ್ಳಲು 2 ದಿನಕೊಮ್ಮೆ ಮನೆ ಮನೆಗೆ ಕಸವನ್ನು ಸಂಗ್ರಹಿಸಿ ರಾಮತೀರ್ಥ ನಗರವನ್ನು ಸುಂದರವಾಗಿಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ವಿಲಾಸ ಕೆರೂರ, ಎಸ್.ಎಸ್.ಕಿವಡಸನ್ನವರ, ಎಮ್.ಬಿ. ನಿರವಾನಿ, ರಾಜು ಪಾಟೀಲ, ವಿಜಯಕುಮಾರ ಹೊಸಟ್ಟಿ , ಬುಡಾ ಅಭಿಯಂತರರಾದ ಹಿರೇಮಠ ಹಾಗೂ ರಾಮತೀರ್ಥ ನಗರದ ರಹವಾಸಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 