ರಾಮತೀರ್ಥ ನಗರದ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ತುತರ್ು ಕ್ರಮ : ಶಾಸಕ ಬೆನಕೆ
ಲೋಕದರ್ಶನ ವರದಿ
ಬೆಳಗಾವಿ 26: ದಿ.26ರಂದು ಶಾಸಕ ಅನಿಲ ಬೆನಕೆರವರು ರಾಮತೀರ್ಥ ನಗರದ 10 ವರ್ಷಗಳಿಂದ ಸರಿಯಾಗಿ ತ್ಯಾಜ್ಯ ವಸ್ತುಗಳ ವಿಲೇವಾರಿಯಾಗದ ಕೆಲಸವನ್ನು ಪೂರ್ಣಗೊಳಿಸಲು ಬುಡಾ ಅಧಿಕಾರಿಗಳ ಜೊತೆ ಸಮನ್ವಯ ಚಚರ್ೆ ನಡೆಸಿ ತ್ಯಾಜ್ಯ ವಿಲೇವಾರಿ ಮಾಡುವ ಸಮಸ್ಯೆಯನ್ನು ಬಗೆಹರಿಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆರವರು ಮಾತನಾಡಿ ರಾಮತೀರ್ಥ ನಗರದ 10 ವರ್ಷಗಳ ಸಮಸ್ಯೆಯಾದ ತ್ಯಾಜ್ಯ ವಿಲೇವಾರಿಯನ್ನು ಬುಡಾ ಅಧಿಕಾರಿಗಳು 2 ದಿನಕೊಮ್ಮೆ ಕಸ ವಿಲೇವಾರಿ ಮಾಡಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸೂಚಿಸಿದರು. ರಾಮತೀರ್ಥ ನಗರದ ರಹವಾಸಿಗಳು ಸಹ ಕಸವನ್ನು ಗಟಾರು ಹಾಗೂ ಇನ್ನಿತರೆ ಸ್ಥಳದಲ್ಲಿ ಎಸೆಯದೆ 2 ದಿನಕೊಮ್ಮೆ ಕಸವನ್ನು ಸಂಗ್ರಹಿಸಿ ಕಸವನ್ನು ಎತ್ತಲು ಮನೆ ಮನೆಗೆ ಬರುವ ವಾಹನದಲ್ಲಿ ಹಾಕಬೆಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬುಡಾ ಅಭಿಯಂತರರಾದ ಹಿರೆಮಠರವರು ರಾಮತೀರ್ಥ ನಗರದ ತ್ಯಾಜ್ಯ ವಿಲೇವಾರಿಯನ್ನು ಕೈಗೊಳ್ಳಲು 2 ದಿನಕೊಮ್ಮೆ ಮನೆ ಮನೆಗೆ ಕಸವನ್ನು ಸಂಗ್ರಹಿಸಿ ರಾಮತೀರ್ಥ ನಗರವನ್ನು ಸುಂದರವಾಗಿಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ವಿಲಾಸ ಕೆರೂರ, ಎಸ್.ಎಸ್.ಕಿವಡಸನ್ನವರ, ಎಮ್.ಬಿ. ನಿರವಾನಿ, ರಾಜು ಪಾಟೀಲ, ವಿಜಯಕುಮಾರ ಹೊಸಟ್ಟಿ , ಬುಡಾ ಅಭಿಯಂತರರಾದ ಹಿರೇಮಠ ಹಾಗೂ ರಾಮತೀರ್ಥ ನಗರದ ರಹವಾಸಿಗಳು ಉಪಸ್ಥಿತರಿದ್ದರು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 