ಕ್ರೀಡೆಗಳಿಂದ ದೇಹಕ್ಕೆ ಶಕ್ತಿ: ಪ್ರಣಯ ಪಾಟೀಲ
ರಾಯಬಾಗ 09: ಕ್ರೀಡೆಗಳಿಂದ ದೇಹದ ನರ ನಾಡಿಗಳು ಬಲಿಷ್ಠವಾಗಿ ದೇಹಕ್ಕೆ ಶಕ್ತಿ, ಮನಸಿಗೆ ಉಲ್ಲಾಸವುಂಟಾಗಿ ಸದಾ ಲವಲವಿಕೆಯಿಂದ ಇರಲು ಸಾಧ್ಯವಾಗುವದರಿಂದಲೇ ಕ್ರೀಡೆಗಳು ಮನುಷ್ಯನ ಅವಿಭಾಜ್ಯ ಅಂಗಗಳೆಂದು ಹೇಳಲಾಗುತ್ತದೆ ಎಂದು ಜಿ.ಪಂ.ಸದಸ್ಯ ಹಾಗೂ ಅಭಾಜಿ ಫೌಂಡೇಶನ್ ಅಧ್ಯಕ್ಷ ಪ್ರಣಯ ಪಾಟೀಲ ಹೇಳಿದರು.
ರವಿವಾರ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಮಾಜಿ ಸಚಿವ, ಸ್ವಾತಂತ್ರ್ಯ ಹೋರಾಟಗಾರ ದಿ. ವ್ಹಿ.ಎಲ್.ಪಾಟೀಲ (ಅಭಾಜಿ) ಅವರ 6ನೇ ಪುಣ್ಯ ಸ್ಮರಣೆ ನಿಮಿತ್ಯವಾಗಿ (ಅಭಾಜಿ) ಫೌಂಢೇಶನ್ದವರು ಏರ್ಪಡಿಸಿದ್ದ ಅಂತರಾರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳಿಗೆ ಬ್ಯಾಟಿಂಗ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ ಮಕ್ಕಳ ಚಿತ್ತ ಕ್ರೀಡೆಗಳತ್ತ ವಾಲುವದರಿಂದ ಕೆಟ್ಟ ಹವ್ಯಾಸಗಳು ಸಮೀಪ ಸುಳಿಯುವದಿಲ್ಲ. ಇಂದಿನ ಮಕ್ಕಳು ಟಿ.ವಿ. ವೀಕ್ಷಣೆಯಿಂದ ದೂರಾಗಿ ಆಟೋಟಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದರೆ ಮರೆಯಾಗುತ್ತಿರುವ ಕ್ರೀಡೆಗಳಿಗೆ ಮರು ಜೀವ ಬಂದಂತಾಗುತ್ತದೆ ಎಂದರು.
ಪಂದ್ಯಾವಳಿಯಲ್ಲಿ ತಮಿಳನಾಡು, ಗೋವಾ, ಗುಜರಾಥ, ಮಹಾರಾಷ್ಟ್ರ ಮತ್ತು ಕನರ್ಾಟಕದ ಹಲವಾರು ತಂಡಗಳು ಸೇರಿದಂತೆ 24 ತಂಡಗಳು ಭಾಗವಹಿಸಿವೆ.
ಕಾರ್ಯಕ್ರಮದಲ್ಲಿ ನಂದು ಮಾನೆ, ಜುಬೇರ ಮುಲ್ಲಾ, ಪ್ರಸಾದ ಕಾತರಕಿ, ಬಿ.ಎಸ್.ಗಡ್ಡೆ, ಗಣೇಶ ಕಾಂಬಳೆ, ಎಸ್.ಬಿ.ಹೋಳ್ಕರ, ಉತ್ತಮಕುಮಾರ ಶಿಂಧೆ, ಹಣಮಂತ ಸಾನೆ, ಭರಮು ಡೋಣಿ, ಅಪ್ಪಾಜಿ ಪೂಜೇರಿ, ರಾಜು ಅಳಾಜ, ಡಾ.ವಿಜಯ ಬೋರೆ, ವಾಸು ಮಣ್ಣಿಕೇರಿ, ಮಹಾದೇವ ಕೊಕಾಟೆ ಇದ್ದರು.
ಜ್ಯೋತಿ ರೂಪಾಳೆ ಸ್ವಾಗತಿಸಿ, ನಿರೂಪಿಸಿದರು. ದೈಹಿಕ ಶಿಕ್ಷಣಾಧಿಕಾರಿ ಡಿ.ಎಸ್.ಡಿಗ್ರಜ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 