ಸಂಗೀತ ಎಂಬುದು ಸುಮಧುರವಾಗಿ ಸೂಸುವ ತಂಗಾಳಿ: ಮೃಂತ್ಯುಂಜಯ ಶ್ರೀ
ಲೋಕದರ್ಶನ ವರದಿ
ಶಿಗ್ಗಾವಿ01 : ಮನುಷ್ಯನ ಜೀವನವೆಂಬ ಜಂಜಾಟದ ಮರಳುಗಾಡಿನಲ್ಲಿ ಸಂಗೀತ ಎಂಬುದು ಸುಮಧುರವಾಗಿ ಸೂಸುವ ತಂಗಾಳಿಯಾಗಿ ಪರಿಣಮಿಸಿದೆ ಎಂದು ನಾರಾಯಣಪುರ ವೀರಕ್ತಮಠದ ಮೃಂತ್ಯುಂಜಯ ಸ್ವಾಮಿಗಳು ಹೇಳಿದರು.
ತಾಲೂಕಿನ ನಾರಾಯಣಪುರ ಗ್ರಾಮದ ವೀರಕ್ತಮಠದ ಆವರಣದಲ್ಲಿ ದುಂಡಿಬಚವೇಶ್ವರ ಸೇವಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಯೋಗಲ್ಲಿ ನಡೆದ ಸಂಗೀತ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು ಸಂಗೀತ ಆಲಿಸುವದರಿಂದ, ಹೇಳುವದರಿಂದ ಮನುಷ್ಯನ ಮನಸ್ಸು ವಿಕಾಶ ಹೊಂದಲು ಸಾಧ್ಯವಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಗಂಗಾಧರ ಬಾವಿಕಟ್ಟಿ ಮಾತನಾಡಿ ಡಾ.ಪಂಡಿತಪುಟ್ಟರಾಜರು ಅಂಧರಾದರೂ ಕೂಡಾ ಸಂಗೀತ ದಿಗ್ಗಜರಾಗಿ ಹೊರಹೊಮ್ಮಿದವರಾಗಿದ್ದರು.
ತಮ್ಮಲ್ಲಿ ಅಡಗಿರುವ ಸಂಗೀತ ವಿದ್ಯಯನ್ನು ಅಂಧ,ಅನಾತಮಕ್ಕಳಿಗೆ ಉಚಿತವಾಗಿ ಧಾರೆ ಎರೆಯುವಮೂಲಕ ಅಂಧರ ಬಾಳಿಗೆ ಬೆಳಕಾದ ಮಹಾ ಚೇತನರಾಗಿ ನಾಡಿನಾಧ್ಯಾಂತ ಪ್ರಜ್ವಲಿಸುತ್ತಿದ್ದಾರೆ. ಸಂಗೀತಕ್ಕೆ ಮನುಷ್ಯನ ಮನಸ್ಸಿಗೆ ಸ್ಫೂತರ್ಿ ಶೆಲೆತುಂಬವ ಶಕ್ತಿ ಅಡಗಿದೆ. ಸಂಗೀತ ಕಲೆಗೆ ಮಾನವರ ಮನಸ್ಸುಗಳಲ್ಲದೆ ಪ್ರಾಣಿಗಳು ಕೂಡಾ ತಲೆ ತೂಗಲಿವೆ ಎಂದು ಹೇಳಿದರು.
ಇಂದ್ರಯ್ಯ ಹಿರೇಮಠ ಹಾಗೂ ದಿಂಗಾಲಯ್ಯ ಹಿರೇಮಠ ರವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಬಸವರಾಜ ಗುಳೇದಕೇರಿ, ಚೆನ್ನಮ್ಮ ಬಂಕಾಪುರ, ಶಂಕರ ಬಿರಾದಾರ, ರವಿ ಬಂಕಾಪುರ, ಗದಿಗಯ್ಯ ಕಡ್ಲಿಮಠ, ಸುಭಾಷ ಮಸಳಿ, ಚನಬಸಪ್ಪ ಬೈಲವಾಳ, ಶ್ರೀನಿವಾಸ ಕುಲಕಣರ್ೀ, ಬಚವಣ್ಣೆಪ್ಪ ಹೊನ್ನಣ್ಣವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 