ಎಂಎಸ್ಪಿ: ಜಗಜಿತ್ಸಿಂಗ್ದಲ್ಲೆವಾಲ್ ಜೀವ ಉಳಿಸಲು ಒತ್ತಾಯ
MSP: Jagjitsingh Dallewal urged to save life
ಎಂಎಸ್ಪಿ: ಜಗಜಿತ್ಸಿಂಗ್ದಲ್ಲೆವಾಲ್ ಜೀವ ಉಳಿಸಲು ಒತ್ತಾಯ
ಹೊಸಪೇಟೆ 13: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಜಿಲ್ಲೆ, ಹೊಸಪೇಟೆ ಕೇಂದ್ರ ಸರ್ಕಾರ ವಿರುದ್ಧ ಇಲ್ಲಿಯವರೆಗೆ 45 ದಿನಗಳಿಂದ ಉಪವಾಸ ನಡೆಸುತ್ತಿರುವ ರೈತ ನಾಯಕರಾದ ಜಗಜಿತ್ಸಿಂಗ್ ದಲ್ಲೆವಾಲ್ ಅವರು ರೈತರು ಬೆಳೆಯುವ ಬೆಳೆಗಳಿಗೆ ಅವರು ಎಂ.ಎಸ್.ಪಿ. ಕನಿಷ್ಠ ಬೆಂಬಲ ಬೆಲೆ ಡಾಽಽ ಎಂ.ಎಸ್.ಸ್ವಾಮಿನಾಥ ಅವರ ವರದಿಯ ಪ್ರಕಾರ ಸಿ2+50 ಮಾನದಂಡ ಅಧಾರವಾಗಿ ಹಾಗೂ ಶಾಸನಬದ್ಧವಾಗಿ ಜಾರಿಗೊಳಿಸಲು ಒತ್ತಾಯಿಸಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈಗ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಅವರಿಗೆ ಏನಾದರೂ ಅಪಾಯವಾದರೆ ಇದಕ್ಕೆ ಕೇಂದ್ರ ಸರ್ಕಾರ ಹೊಣೆಗಾರಿಕೆ ಹೋರಬೇಕಾಗುತ್ತದೆ ಎಂದು ಎಚ್ಚರಿಕೆ ಮುಟ್ಟಿಸಲು ನಾವು ಇಂದು ರಾಜ್ಯದ ಪ್ರತಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಎಚ್ಚರಿಕೆ ಮುಟ್ಟಿಸಲು ಮನವಿ ಪತ್ರ ಕೊಡಲು ಪ್ರಧಾನಿ ರೈತರ ಜೊತೆ ಹುಡುಗಾಟಿಕೆ ನಡೆಸುತ್ತಿದ್ದಾರೆ. ಇದಲ್ಲದೆ ರೈತರ ಮೂಗಿಗೆ ತುಪ್ಪ ಸವರಿ ತಮಾಷೆ ಮಾಡುತ್ತಿದ್ದಾರೆ. ಇದು ರೈತರಿಗೆ ವಿರೋಧವಾಗಿದ್ದು ಇದನ್ನು ಖಂಡಿಸುತ್ತಿದ್ದೇವೆ. ಇದೆಲ್ಲ ರೈತರು ಬೆಳೆದ ಬೆಳೆಗಳಿಗೆ ಎಂ.ಎಸ್.ಪಿ. ಶಾಸನ ಬದ್ಧ ಜಾರಿಗೊಳಿಸಿ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಜೀವ ಉಳಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ.
ಈ ಸಂದರ್ಭದಲ್ಲಿ ಆರ್.ಆರ್ ತಾಯಪ್ಪ, ಕೆ.ಜಹಿರುದ್ದೀನ್, ದೊಡ್ಡಗಾಳೆಪ್ಪ, ಅಯ್ಯಣ್ಣ, ಕೆ.ಮೂರ್ತಿ, ಕೆ.ಹೇಮರೆಡ್ಡಿ, ಹೆಚ್.ಪಿ.ನಾಗರಾಜ, ಜಿ.ಗೋವಿಂದಪ್ಪ, ಜಿ.ಬಸವರಾಜ, ರಾಮಾಂಜಿನಿ, ಹಾಗೂ ಇನ್ನಿತರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಭಾಗವಹಿಸಿ ಮನವಿ ಪತ್ರ ಸಲ್ಲಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 