ಅಧ್ಯಕ್ಷರಾಗಿ ಕೇದಾರ​‍್ಪ ಶಂಕ್ರ​‍್ಪ ಬಗಾಡೆ ಆಯ್ಕೆ

Kedarpa Shankrappa Bagade was elected as the President

ಅಧ್ಯಕ್ಷರಾಗಿ ಕೇದಾರ​‍್ಪ ಶಂಕ್ರ​‍್ಪ ಬಗಾಡೆ ಆಯ್ಕೆ

ಶಿಗ್ಗಾವಿ 4: ಪಟ್ಟಣದ ವಿಠಲ ಹರಿ ಮಂದಿರದಲ್ಲಿ ನಾಮದೇವ ಸಿಂಪಿ ಸಮಾಜದ ನೂತನ ಕಾರ್ಯಕಾರಿಣಿ ಸಮಿತಿಯನ್ನು ಸರ್ವ ಸದಸ್ಯರ ನೇತೃತ್ವದಲ್ಲಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಸುರೇಶ ಮೂಳೆ, ಅಧ್ಯಕ್ಷರಾಗಿ ಕೇದಾರ​‍್ಪ ಶಂಕ್ರ​‍್ಪ ಬಗಾಡೆ, ಉಪಾಧ್ಯಕ್ಷರಾಗಿ ಕೃಷ್ಣಾ ಮೂಳೆ, ಏಕನಾಥ ಮಾಳವಾದೆ, ಕಾರ್ಯದರ್ಶಿಯಾಗಿ ಸುಧೀರ ಮಾಳವಾದೆ ಯವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.ನೂತನ ಅಧ್ಯಕ್ಷ ಕೇದಾರ​‍್ಪ ಬಗಾಡೆ ಮಾತನಾಡಿದ ಅವರು ಸಮಾಜ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಇನ್ನಷ್ಟು ಅಭಿವೃದ್ಧಿಯ ಕೆಲಸ ಕಾರ್ಯಗಳು ಸಾಗಬೇಕಾಗಿವೆ, ಈ ನಿಟ್ಟಿನಲ್ಲಿ ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿ ಸಮಾಜದ ಏಳಿಗೆಗೆ ಇನ್ನಷ್ಟು ಕೊಡುಗೆಗಳನ್ನು ನೀಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮ್ಮೆಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.    ಈ ಸಂದರ್ಭದಲ್ಲಿ ಕೇಶವರಾವ ಉಂಡಾಳೆ, ವಿನೋಬಾ ಮಾಳವದೆ, ಆನಂದ ಲಾಳಗೆ, ರಾಮಚಂದ್ರ​‍್ಪ ಗಂಡೊಳಕರ, ಸಂಜೀವ ಮಾಳವದೆ, ದಾಮೋದರ ಮಾಳವದೆ, ಗೋಪಾಲ ಮಾಳವದೆ, ಪ್ರಕಾಶ ಮಿರಜಕರ, ಸುನಿಲ್ ಮಾಳವದೆ, ನಾಗರಾಜ ಗಂಜೀಗಟ್ಟಿ, ಮಂಜುನಾಥ ಗಂಜೀಗಟ್ಟಿ, ಕೃಷ್ಣ ಮಾಳವದೆ ಅಮಿತ ಗಂಜೀಗಟ್ಟಿ, ಅನುರಾಧಾ ಗಂಜೀಗಟ್ಟಿ, ರೂಪಾ ಬಗಾಡೆ ಮುಂತಾದವರು ಉಪಸ್ಥಿತರಿದ್ದರು.