ಜೋಯಿಡಾದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
.
ಜೋಯಿಡಾ; ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸ ಇದೆ. ಸ್ವಾತಂತ್ರ ನಂತರ ಭಾಷಾವಾರು ಪ್ರಾಂಗವಳನ್ನು ವಿಂಗಡಿಸಿದಾಗ ಮೈಸೂರ ರಾಜ್ಯವನ್ನು ಕನರ್ಾಟಕ ರಾಜ್ಯವೆಂದು ನಾಮಕರಣ ಮಾಡಲಾಯಿತು. ದೇಶದಲ್ಲಿ ಕನ್ನಡ ಭಾಷೆಯೊಂದೇ 8 ಜ್ಞಾನ ಪೀಟ ಪ್ರಶಸ್ತಿಗಳನ್ನು ಪಡೆದುಕೊಂಡು ಹೆಗ್ಗಳಿಕೆ ನಮ್ಮದಾಗಿದೆ. ಇಂತರ ರಾಜ್ಯದಲ್ಲಿ ನಾವು ಇರುವುದು ಹೆಮ್ಮೆತಂದಿದೆ. ಏಕತೆಗೆ ಎಲ್ಲರೂ ಕೈಜೋಡಿಬೇಕೆಂದು ತಹಶಿಲ್ದಾರ ಸಂಜಯ ಕಾಂಬ್ಳೆ ಹೇಳಿದರು.
ಅವರು ಜೋಯಡಾ ತಹಶಿಲ್ದಾರ ಕಚೇರಿ ಆವರಣದಲ್ಲಿ ಶ್ರೀ ಕನ್ನಡಾಂಬೆಗೆ ಪೂಜೆ ಸಲ್ಲಿಸಿದ ನಂತರ ಮಾತನಾಡುತ್ತಿದ್ದರು. ಜಿಲ್ಲಾ ಪಂಚಾಯತ ಸದಸ್ಯ ರಮೇಶ ನಾಯ್ಕರಿಂದ ವಿವಿಧ ಸ್ಥಂಬ್ದ ಚಿತ್ರಗಳ ಮೆರವಣೆಗೆಗೆ ಕನ್ನಡ ಬಾವುಟವನ್ನು ತೋರಿಸಿ ಚಾಲನೆ ನೀಡಿದರು. ತಾ.ಪಂ.ಅಧ್ಯಕ್ಷೆ ನರ್ಮದಾ ಪಾಟ್ನೆಕರ, ಗ್ರಾ.ಪಂ.ಅ. ಶೈಲಾ ನಾಯ್ಕ, ಉಪಾಧ್ಯಕ್ಷ ಶ್ಯಾಮ ಪೊಕಳೆ, ಕ.ಸಾ.ಪ ಅಧ್ಯಕ್ಷ ಸುಭಾಷ ಗಾವಡಾ, ಕರವೆ ಅಧ್ಯಕ್ಷ ಸುರಜ ಹಿರೆಗೌಡ, ಗಣೇಶ ಹೆಗಡೆ, ಗ್ರಾ.ಪಂ.ಸ. ವಿನಯ ದೇಸಾಯಿ, ಸುಭಾಷ ವೆಳಿಪ, ಸುರೇಶ ಗಾವಡಾ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಹಾಲಮ್ಮನವರ, ಪಿ.ಡಬ್ಲೂಡಿ ಛಬ್ಬಿ, ಹಾಗೂ ಎಲ್ಲಾ ಇಲಾಖಾ ಅಧಿಕಾರಿಗಳಿಂದ ಪೂಜೆ ಸಲ್ಲಿಸಲಾಯಿತು.
ತಹಶಿಲ್ದಾರ ಕಾಯರ್ಾಲಯದಿಂದ ಮುಖ್ಯ ರಸ್ತೆಗಳಲ್ಲಿ ಸ್ಥಬ್ದ ಚಿತ್ರಗಳ ಮೆರವಣಿಗೆ ನಡೆಯಿತು. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆಸಲಾದ ಸ್ತಬ್ದಚಿತ್ರಕ್ಕೆ ಪ್ರಥಮ ಬಹುಮಾನ, ಬಿಜಿವಿಎಸ್ ಕಾಲೇಜ ದ್ವಿತಿಯ, ಪ್ರೌಢ ಶಾಲೆ ತ್ರತಿಯ, ಹಿರಿಯ ಪ್ರಾಥಮಿಕ ಶಾಲೆ ನಾಲ್ಕನೆ ಬಹುಮಾನ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 