ಇಂಡಿ: ಅಭಿವೃದ್ದಿಯತ್ತ ಗಮನಹರಿಸುತ್ತೇವೆ: ಭೀಮನಗೌಡ
ಲೋಕದರ್ಶನ ವರದಿ
ಇಂಡಿ 02: ಪುರಸಭೆ ಚುನಾವಣೆಯಲ್ಲಿ ನಮ್ಮನ್ನು ಆಯ್ಕೆ ಮಾಡಿದ ಜನರ ಋಣ ತೀರಿಸಲು ನಾವು ಬಂದಿದ್ದೇವೆ. ಯಾವುದೇ ಪಕ್ಷಪಾತ ಮಾಡದೆ ವಾರ್ಡ ಅಭಿವೃದ್ದಿಯತ್ತ ನಾವು ಗಮನಹರಿಸುತ್ತೇವೆ ಎಂದು ನೂತನವಾಗಿ ಪುರಸಭೆಗೆ ಆಯ್ಕೆಯಾದ ಸದಸ್ಯ ಭೀಮನಗೌಡ ಪಾಟೀಲ ಹೇಳಿದರು.
ಪಟ್ಟಣದ ವೀರರಾಣಿ ಕಿತ್ತೂರ ಚನ್ನಮ್ಮ ಸಹಕಾರಿ ಸಂಘದ ಕಾಯರ್ಾಲಯದಲ್ಲಿ ಹಮ್ಮಿಕೊಂಡ ನೂತನ ಪುರಸಭಾ ಸದಸ್ಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಳೆದ ಐದು ಬಾರಿಯಿಂದ ಸತತವಾಗಿ ಪುರಸಭೆ ಸದಸ್ಯನಾಗಿ ಆಯ್ಕೆಯಾಗಿ ಎರಡು ಬಾರಿ ಅಧ್ಯಕ್ಷ ಸ್ಥಾನ ಪಡೆದುಕೊಂಡು ಕಾರ್ಯ ಮಾಡಿದ್ದೇನೆ. ನನ್ನೊಂದಿಗೆ ಈಗ ಹತ್ತು ಹಲವು ಹೊಸ ಸದಸ್ಯರು ಆಯ್ಕೆಯಾಗಿದ್ದು ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಟ್ಟಣದ ಅಭಿವೃದ್ದಿ ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು.
ಎರಡನೇ ಅವಧಿಗೆ ಸದಸ್ಯರಾಗಿ ಆಯ್ಕೆಯಾದ ಅನೀಲಗೌಡ ಬಿರಾದಾರ ಮಾತನಾಡಿದರು.
ನೂತನವಾಗಿ ಸದಸ್ಯರಾಗಿ ಆಯ್ಕೆಯಾದ ಶ್ರೀಶೈಲ ಪೂಜಾರಿ, ಅಸ್ಲಮ್ ಕಡಣಿ, ರೇಣುಕಾ ಉಟಗಿ, ಸತೀಶ ಕುಂಬಾರ, ಸಾಯಬಣ್ಣ ಮೂರಮನ್, ಉಮೇಶ ದೇಗಿನಾಳ ಅವರನ್ನು ಸತ್ಕರಿಸಲಾಯಿತು. ಸನ್ಮಾನ ಸಮಾರಂಭದಲ್ಲಿ ಉಮೇಶ ಬಳಬಟ್ಟಿ, ನಿಂಗನಗೌಡ ಬಿರಾದಾರ, ಭೀಮಾಶಂಕರ ಪ್ರಚಂಡಿ, ಶರಣಗೌಡ ಬಂಡಿ, ಯಲಗೊಂಡ ಬೇವನೂರ, ಶ್ರೀಶೈಲ ಕೋರಳ್ಳಿ, ಪ್ರಶಾಂತಗೌಡ ಬಿರಾದಾರ, ಸಂತೋಶ ದೇವರ, ಈಶ್ವರ ಪಾಟೀಲ, ಕುಮಾರಗೌಡ ಪಾಟೀಲ, ಸಂಜೀವ ದಶವಂತ ಅಶೋಕ ಬಳಬಟ್ಟಿ, ಶಿವು ಗಡಗಲಿ, ಸಚಿನ ಬಾರಿಕಾಯಿ, ನಾಗು ದಶವಂತ, ಪ್ರವೀಣ ಮಠ ಮತ್ತಿತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 