ವಜ್ರವಾಡ ಗ್ರಾಮದಲ್ಲಿ: ಕಾಣೆಯಾದ ಬಾಲಕಿ ಶವ ಬಾವಿಯಲ್ಲಿ ಪತ್ತೆ
ಸಂಬರಗಿ 10: ಮಹಾರಾಷ್ಟ್ರದ ಜತ್ತ ತಾಲೂಕಿನ ವಜ್ರವಾಡ ಗ್ರಾಮದ 4ನೇ ತರಗತಿಯ 11ವರ್ಷದ ಬಾಲಕಿ ಅಕ್ಷರಾ ಸಿದ್ದಯ್ಯಾ ಮಠಪತಿ ಗುರುವಾರ ಕಾಣೆಯಾಗಿದ್ದು ಶನಿವಾರ ಬಾಲಕಿಯ ಮೃತ ದೇಹವು ತೆರೆದ ಬಾವಿಯಲ್ಲಿ ಪತ್ತೆಯಾಗಿದೆ.
ಘಟನೆಯ ವಿವರ: ವಜ್ರವಾಡ ಗ್ರಾಮದ ಅಕ್ಷರಾ ಸಿದ್ದಯ್ಯಾ ಮಠಪತಿ ಬೆಳಿಗ್ಗೆ ಶಾಲೆಗೆ ಹೋದ ನಂತರ ಮರಳಿ ಮನೆಗೆ ಬಂದಿಲ್ಲ. ಅವರ ಮನೆಯ ಎಲ್ಲ ಜನರು ಕೂಡಿಕೊಂಡು ಕಳೆದುಕೊಂಡ ಬಾಲಕಿಯ ಹುಡುಕಾಟ ಮಾಡಿದರೂ ಸಿಕ್ಕಿಲ್ಲ. ಈ ಕುರಿತು ಬಾಲಕಿ ಕಾಣೆಯಾಗಿದ್ದಾಳೆಂದು ಜತ್ತ ಪೋಲೀಸ್ ಠಾಣೆಗೆ ಅವಳ ಚಿಕ್ಕಪ್ಪ ಪವಾಡಯ್ಯ ಮಠಪತಿ ಅವರು ದೂರು ದಾಖಲಿಸಿದರು. ಆನಂತರ ಗುರುವಾರ ಹಾಗೂ ಶುಕ್ರವಾರ ಪೋಲಿಸ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಶೋಧಕಾರ್ಯ ನಡೆಸಿದರೂ ಬಾಲಕಿಯನ್ನು ಹುಡುಕುವಲ್ಲಿ ವಿಫಲರಾದರು. ವಜ್ರವಾಡ ಗ್ರಾಮದ ಹೊರವಲಯದ ತೋಟದ ತೆರೆದ ಬಾವಿಯಲ್ಲಿ ಆ ಬಾಲಕಿಯ ಶವವು ಶನಿವಾರ ಪತ್ತೆಯಾಯಿತು. ಜತ್ತ ಪೋಲೀಸ್ ಠಾಣೆಯ ಪಿ.ಎಸ್.ಐ ರಣಜೀತ ಗುಂಡರೆ ಇವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಾಲಕಿಯ ಶವವನ್ನು ಜತ್ತ ಸಕರ್ಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ಮಾಡಲಾಯಿತು. ಈ ಸಾವು ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.
ಪೋಟೋ ಶಿಷರ್ಿಕೆ: ಅಕ್ಷರಾ ಮಠಪತಿ ಇವಳ ಭಾವಚಿತ್ರ (09 ಸಂಬರಗಿ 2)
ಅಕ್ಷರಾ ಶವ ದೊರೆತ ತೆರೆದ ಬಾವಿಯ ಜತ್ತ ಪೋಲೀಸ್ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡುತ್ತಿರುವುದು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 