ಸಮಾಜದ ಮುಖಂಡರಿಗೆ ಹಕ್ಕು ಪತ್ರ ಹಸ್ತಾಂತರಿಸಿ
ಲೋಕದರ್ಶನ ವರದಿ
ಇಂಡಿ 25:ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂಡಿ ತಾಲೂಕಾ ಹರಳಯ್ಯ ಸಮುಜಾದ ಮುಖಂಡರಿಂದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅದಕ್ಷ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸನ್ಮಾನಿದರು.
ಈ ಸಂದರ್ಭದಲ್ಲಿ ಶ್ರೀ ಶಿವಶರಣ ಸಮಗಾರ ಹರಳಯ್ಯನವರ ಸಮುದಾಯ ಭವನದ ನೀವೇಶನದ ಹಕ್ಕು ಪತ್ರವನ್ನು ಸಮಾಜದ ಮುಖಂಡರಿಗೆ ಹಸ್ತಾಂತರಿಸಿ ಮಾತನಾಡಿ ಹರಳಯ್ಯ ಸಮಾಜ ಬಾಂದವರು ಸಹೃದಯಿಗಳಾಗಿದ್ದು ಎಲ್ಲರ ಜೊತೆ ಬೆರೆತು ಹೊಗುವಂತವರಾಗಿದ್ದಾರೆ. ಮಾತು ಕೊಟ್ಟಂತೆ ಇಂದು ತಮ್ಮ ಬಹುದಿನಗಳ ಬೇಡಿಕೆ ಇಡೇರಿದೆ. ಇದನ್ನು ಉಳಿಸಿ ಬೆಳಸಿಕೊಂಡು ಹೊಗುವುದು ಬಹಳ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಮಾಜ ಏಳಿಗೆಗಾಗಿ ಶ್ರಮಿಸಬೇಕು. ಅಲ್ಲದೆ ಎಲ್ಲ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಎಳಿಗೆಗಾಗಿ ಶ್ರಮಿಸಬೇಕು. ಹರಳಯ್ಯ ಸಮುದಾಯದ ಜನ ಮುಗ್ದ ಜನಾಂಗವಾಗಿದ್ದು ನಿಮ್ಮ ಬೇಕು ಬೇಡಿಕೆಗಾಗಿ ಸದಾ ಸಹಾಯ ಸಹಕಾರ ನೀಡುತ್ತೆನೆ ಎಂದರು.
ಈ ಸಂದರ್ಭದಲ್ಲಿ ಎಮ್.ಎಸ್.ಕಟ್ಟಿಮನಿ, ಇಮ್ರಾನ ಮಿರಜಕರ, ಚಂದಪ್ಪ ಕಟ್ಟಿಮನಿ, ಕಾಸು ಹೊಸಮನಿ, ಮಹೇಶ ಹೊನ್ನಬಿಂದಗಿ, ರಾಜು ಚಾಬುಕಸವಾರ, ಜಟ್ಟೆಪ್ಪ ಕಟ್ಟಿಮನಿ, ಕಾಸು ಕಟ್ಟಿಮನಿ, ಪರಶುರಾಮ ಚಾಬುಕಸವಾರ, ಜಟ್ಟೆಪ್ಪ ಹೊನ್ನಕೊರೆ, ಬಂಗಾರೆಪ್ಪ ಮಾನೆ, ಪರಮೇಶ್ವರ ಕಟ್ಟಿಮನಿ, ಗಣೆಶ ಹೊನ್ನಮೊರೆ, ಕಾಸು ಕಟ್ಟಿಮನಿ, ಶಾಂತು ಕಟ್ಟಿಮನಿ ಸೇರಿದಂತೆ ಅನೇಕರಿದ್ದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 