ಉಚಿತ ಗಿರಿಜಾ ಕೋಳಿ ಮರಿ ವಿತರಣೆ
ಲೋಕದರ್ಶನ ವರದಿ
ರಾಯಬಾಗ 05: ರೈತರು ಉಪಕಸುಬವನ್ನಾಗಿ ಕೋಳಿಗಳನ್ನು ಸಾಕಾಣಿಕೆ ಮಾಡುವುದರಿಂದ ತಮ್ಮ ಉಪಜೀವನಕ್ಕೆ ಅನುಕೂಲವಾಗುತ್ತದೆ. ಬಡಜನರಿಗೆ ಅನುಕೂಲವಾಗಲು ಉಚಿತವಾಗಿ ಕೋಳಿಗಳನ್ನು ನೀಡಲಾಗುತ್ತಿದೆ ಎಂದು ಜಿ.ಪಂ.ಸದಸ್ಯೆ ಜಯಶ್ರೀ ಮೊಹಿತೆ ಹೇಳಿದರು.
ದಿ.04ರಂದು ತಾಲೂಕಿನ ಜಲಾಲಪೂರ ಗ್ರಾಮದಲ್ಲಿ ಜಿ.ಪಂ. ಯೋಜನೆಯಡಿಯಲ್ಲಿ ಬಾವನ ಸೌಂದತ್ತಿ ಜಿ.ಪಂ. ವ್ಯಾಪ್ತಿಯ ಬಾವನಸೌಂದತ್ತಿ, ಯಡ್ರಾಂವ, ದಿಗ್ಗೇವಾಡಿ, ಜಲಾಲಪೂರ, ಭಿರಡಿ, ಬೆಕ್ಕೇರಿ ಗ್ರಾಮದ 75 ಜನ ಫಲಾನುಭವಿಗಳಿಗೆ ಉಚಿತವಾಗಿ 750 ಗಿರಿಜಾ ಕೋಳಿ ಮರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಮಹಾವೀರ ಮೋಹಿತೆ, ತಾ.ಪಂ.ಸದಸ್ಯ ನಾಮದೇವ ಕಾಂಬಳೆ, ಗಣೇಶ ಮೋಹಿತೆ, ಶಾಂತಗೌಡ ಪಾಟೀಲ, ಡಾ.ಪ್ರಮೋದ ತಳವಾರ, ದಿಲೀಪ ಜಮಾದಾರ, ವಿಠ್ಠಲ ಬಂಡಗಾರ, ಎಮ್.ಎನ್.ಸಲಗರೆ, ಗಂಗಾಧರ ಕಾಂಬಳೆ, ಅಜರ್ುನ ಬಂಡಗರ, ಮಹೇರಅಲಿ ಜಮಾದಾರ, ಆನಂದ ಚೌಗುಲಾ, ಸಂಜು ಚೌಗಲಾ, ಮಾರುತಿ ಕಾಂಬಳೆ, ವಿಲಾಸ ಹೆರವಾಡೆ, ಅಣ್ಣಾಸಾಬ ಕೊಣೆ ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 