ಉಚಿತ ಗಿರಿಜಾ ಕೋಳಿ ಮರಿ ವಿತರಣೆ
ಲೋಕದರ್ಶನ ವರದಿ
ರಾಯಬಾಗ 05: ರೈತರು ಉಪಕಸುಬವನ್ನಾಗಿ ಕೋಳಿಗಳನ್ನು ಸಾಕಾಣಿಕೆ ಮಾಡುವುದರಿಂದ ತಮ್ಮ ಉಪಜೀವನಕ್ಕೆ ಅನುಕೂಲವಾಗುತ್ತದೆ. ಬಡಜನರಿಗೆ ಅನುಕೂಲವಾಗಲು ಉಚಿತವಾಗಿ ಕೋಳಿಗಳನ್ನು ನೀಡಲಾಗುತ್ತಿದೆ ಎಂದು ಜಿ.ಪಂ.ಸದಸ್ಯೆ ಜಯಶ್ರೀ ಮೊಹಿತೆ ಹೇಳಿದರು.
ದಿ.04ರಂದು ತಾಲೂಕಿನ ಜಲಾಲಪೂರ ಗ್ರಾಮದಲ್ಲಿ ಜಿ.ಪಂ. ಯೋಜನೆಯಡಿಯಲ್ಲಿ ಬಾವನ ಸೌಂದತ್ತಿ ಜಿ.ಪಂ. ವ್ಯಾಪ್ತಿಯ ಬಾವನಸೌಂದತ್ತಿ, ಯಡ್ರಾಂವ, ದಿಗ್ಗೇವಾಡಿ, ಜಲಾಲಪೂರ, ಭಿರಡಿ, ಬೆಕ್ಕೇರಿ ಗ್ರಾಮದ 75 ಜನ ಫಲಾನುಭವಿಗಳಿಗೆ ಉಚಿತವಾಗಿ 750 ಗಿರಿಜಾ ಕೋಳಿ ಮರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಮಹಾವೀರ ಮೋಹಿತೆ, ತಾ.ಪಂ.ಸದಸ್ಯ ನಾಮದೇವ ಕಾಂಬಳೆ, ಗಣೇಶ ಮೋಹಿತೆ, ಶಾಂತಗೌಡ ಪಾಟೀಲ, ಡಾ.ಪ್ರಮೋದ ತಳವಾರ, ದಿಲೀಪ ಜಮಾದಾರ, ವಿಠ್ಠಲ ಬಂಡಗಾರ, ಎಮ್.ಎನ್.ಸಲಗರೆ, ಗಂಗಾಧರ ಕಾಂಬಳೆ, ಅಜರ್ುನ ಬಂಡಗರ, ಮಹೇರಅಲಿ ಜಮಾದಾರ, ಆನಂದ ಚೌಗುಲಾ, ಸಂಜು ಚೌಗಲಾ, ಮಾರುತಿ ಕಾಂಬಳೆ, ವಿಲಾಸ ಹೆರವಾಡೆ, ಅಣ್ಣಾಸಾಬ ಕೊಣೆ ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 