ಹಳ್ಳಿಗಾಡಿನಲ್ಲಿ ಜನಪದ ಸಾಹಿತ್ಯ ಜೀವಂತ: ಡಾ.ಅಂಜಿನಾ
ಲೋಕದರ್ಶನ ವರದಿ
ಹೂವಿನಹಡಗಲಿ 27: ಜನಪದ ಇತರ ಸಾಹಿತ್ಯದ ತಾಯಿಬೇರು,ಗ್ರಾಮೀಣ ಪ್ರದೇಶದಲ್ಲಿ ಮನುಷ್ಯನ ಬದುಕಿನ ಶೈಲಿಯ ಭಾಗವಾಗಿ ಜನಪದವನ್ನು ಅಳವಡಿಸಿಕೊಂಡು ದಣಿದ ದೇಹಕ್ಕೆ ತಮ್ಮ ಕೆಲಸದ ಬಿಡುವಿನ ವೇಳೆ ಹಾಡುಗಳನ್ನು ಹಾಡುವ ಮೂಲಕ ಇನ್ನು ಜೀವಂತವಾಗಿದೆ ಎಂದು ಲೇಖಕಿ ಡಾ.ಅಂಜಿನಾಕೃಷ್ಣಪ್ಪ ಹೇಳಿದರು.
ಪಟ್ಟಣದ ಎಸ್ಕೆಜಿಜೆ ಕಾಲೇಜು ಆವರಣದಲ್ಲಿ ಬಸರಹಳ್ಳಿಯ ಜ್ಞಾನಭಾರತಿ ವಿದ್ಯಾಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಭಾವಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಜನಪದ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲೆ ಇದೆ ಎಂದರು.
ಶಿಕ್ಷಕರಾದ ವೀರೇಶ, ಬಿ.ಲಿಂಗಪ್ಪ, ಕುಮಾರಸ್ವಾಮಿ ಮಾತನಾಡಿದರು. ಕಾಲೇಜಿನ ಉಪಪ್ರಾಚಾರ್ಯ ಚಂದ್ರಗೌಡ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಕಲಾವಿದ ಕೆ.ಸಿ.ಪರಶುರಾಮ ಅಂಗೂರು, ಎಂ.ಪರಶುರಾಮ ಸಿಬ್ಬಂದಿ ಇದ್ದರು. ಓಂಕಾಂ ಚನ್ನಮ್ಮ ಮತ್ತು ತಂಡ ಅಂಗೂರು ಇವರಿಂದ ಸೋಬಾನೆ ಪದಗಳು, ಹಿರೇಹಡಗಲಿ ಕೊರವರ ರಮೇಶ ಮತ್ತು ತಂಡದಿಂದ ಕ್ಲಾರಿಯೋನೇಟ್,ವಾದನ, ಬಾವಸಂಗಮ ಕಾರ್ಯಕ್ರಮ ನಡೆದವು. ಶಿಕ್ಷಕಿ ಎಚ್.ಎಂ.ಸುಮಂಗಲ ಹಣ್ಣಿ ,ನರೇಶ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 