ಪರಿಸರ ಸ್ನೇಹಿ ಉದ್ಯಾನದಲ್ಲಿ: ಸಂಕ್ರಾಂತಿ ಹಬ್ಬ ಆಚರಣೆ
ಲೋಕದರ್ಶನವರದಿ
ಬ್ಯಾಡಗಿ16: ಎಳ್ಳು ಹಚ್ಚಿದ ರೊಟ್ಟಿ, ಎಣ್ಣಿಗಾಯಿ, ಮೊಳಕೆಯೊಡೆದ ಕಾಳಿನ ಪಲ್ಯ, ಎಳ್ಳು ಹೋಳಿಗೆ, ಗೋದಿಹುಗ್ಗಿ, ಸಿಹಿಬಾತ್ ಸೇರಿದಂತೆ ವಿವಿಧ ತರದ ಚಟ್ನಿಗಳು, ಚಿತ್ರಾನ್ನ, ಮೊಸರನ್ನು ಮುಂತಾದ ಖಾದ್ಯಗಳು ಸಂಕ್ರಾಂತಿ ನಿಮಿತ್ತ ತಾಲೂಕಿನ ಕಾಗಿನೆಲೆ ಕನಕ ಸ್ನೇಹಿ ಉದ್ಯಾನವನದಲ್ಲಿ ಕಂಡು ಬಂದ ಬಗೆಬಗೆಯ ಖಾದ್ಯಗಳು
ಸಂಕ್ರಾಂತಿ ದಿನದಂದು ನದಿ ಸಮುದ್ರಗಳಿಗೆ ತೆರಳಿ ಸ್ನಾನ ಮಾಡಿ ಬಳಿಕ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ ಆದರೆ ತಾಲೂಕಿನಲ್ಲಿ ಯಾವುದೇ ಪ್ರಮುಖ ನದಿಗಳು ಹರಿಯದೇ ಇರುವುದರಿಂದ ಮಹಿಳೆಯರು ಕುಟುಂಬ ಸಮೇತರಾಗಿ ಪರಿಸರ ಸ್ನೇಹಿ ಉದ್ಯಾನವನಕ್ಕೆ ತೆರಳಿ ಸಂಕ್ರಾಂತಿ ಆಚರಿಸಿಕೊಂಡರು.
ಹೊಸ ಪರಿಚಯಸ್ಥರೊಂದಿಗೆ ಸಹಭೋಜನ ಸವಿದ ಜನರು, ಬಳಿಕ ಉದ್ಯಾನವನದಲ್ಲಿ ಸುತ್ತಿದರು, ಈ ಸಂದರ್ಭದಲ್ಲಿ ವಿವಿಧ ಜಾತಿಯ ಸಸ್ಸೌಷಧಿ ಗಿಡಗಳು ಸೇರಿದಂತೆ, ವಿವಿಧ ಜಾತಿ ಹೂವುಗಳನ್ನು ಕಂಡು ಆನಂದಿಸಿದರು.
ಹಿರಿಯರು ಚಿಕ್ಕ ಮಕ್ಕಳೊಂದಿಗೆ ತಾವೂ ಮಕ್ಕಳಂತೆ ಆಟವಾಡಿ ಸಂಭ್ರಮಿಸಿದರು. ಭಕ್ತ ಕನಕದಾಸರ ಬೃಹತ್ ಮೂತರ್ಿ ಎದುರಿಗೆ ನಿಂತು ಫೋಟೊಗಳನ್ನು ತೆಗೆಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 