ದೊಡ್ಡಾಟ ಪ್ರದರ್ಶನಕ್ಕೆ ಚಾಲನೆ
ಲೋಕದರ್ಶನ ವರದಿ
ಶಿಗ್ಗಾವಿ14: ಗೊಟಗೋಡಿಯ ಬಕ್ಕೇಶ್ವರ ದೊಡ್ಡಾಟ ಮಂಡಳಿ ಪ್ರದಶರ್ಿಸಿದ ಕುರುಕ್ಷೇತ್ರ ಅಥರ್ಾತ್ ಭೀಮ-ದುಯರ್ೋಧನರ ಗದಾಯುದ್ದ ಪ್ರೇಕ್ಷಕರನ್ನು ರಂಜಿಸಲು ಯಶಸ್ವಿಯಾಯಿತು.
ದೊಡ್ಡಾಟ ಪ್ರದರ್ಶನಕ್ಕೆ ಚಾಲನೆ ನೀಡಿದ ಕಲಾವಿದ ಡಾ.ಟಿ.ಬಿ. ಸೊಲಬಕ್ಕನವರ ಮಾತನಾಡಿ, ಜಾತಿ ಮತ್ತು ಧರ್ಮದ ಆಧಾರದಲ್ಲಿ ರಾಜಕೀಯ ಜನರನ್ನು ವಿಭಜಿಸುತ್ತದೆ.
ಆದರೆ ನಮ್ಮ ಬದುಕಿನ ಭಾಗವಾಗಿರುವ ದೊಡ್ಡಾಟ ಜನರನ್ನು ಒಂದುಗೂಡಿಸುತ್ತದೆ ಎಂದರು.
ಡಾ.ಶ್ರೀಶೈಲ ಹುದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಥೆಗಾರ ಗೋವಿಂದಪ್ಪ ತಳವಾರ ನಿದರ್ೇಶನ, ಶಂಕರ ಅರ್ಕಸಾಲಿ ಪ್ರಸಾಧನ, ಭರಮಪ್ಪ ಭಜಂತ್ರಿ ಶಹನಾಯಿ, ಚನ್ನಬಸಪ್ಪ ಬೆಂಡಿಗೇರಿ ಮೃದಂಗ, ವಿರೂಪಾಕ್ಷಪ್ಪ ಪಾಲಗಣ್ಣವರ ಹಾರ್ಮೋನಿಯಂ ಸಾಥ್ ದೊಡ್ಡಾಟದ ಮೆರುಗನ್ನು ಹೆಚ್ಚಿಸಿತು.
ವಿರೂಪಾಕ್ಷಪ್ಪ ಗೊಟಗೋಡಿಮಠ, ಯಲ್ಲಪ್ಪ ಮೆಣಸಿನಕಾಯಿ, ನಿಂಗಪ್ಪ ಕುರುಬರ, ಹಜರೇಸಾಬ ಮುಲ್ಲಾನವರ, ಅಜರ್ುನ ವಾಲೀಕಾರ ಹಿನ್ನೆಲೆ ಸಂಗೀತ ಒದಗಿಸಿದರು.
ಮುಖಂಡರಾದ ಅಜರ್ುನ ಹಂಚಿನಮನಿ, ಶಿವಾನಂದ ಮ್ಯಾಗೇರಿ, ವನಹಳ್ಳಿ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು, ಗೊಟಗೋಡಿ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 