ಕೇಂದ್ರ ಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಚಾಲನೆ
ತಾಲೂಕು ಪರೀವೀಕ್ಷಕರಾದ ಡಿ.ಎಸ್.ಡಿಗ್ರಜರವರು ಮಾತನಾಡುತ್ತಿರುವುದು.
ಮುಗಳಖೋಡ 19: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲಾ ಆವರಣದಲ್ಲಿ ಕೇಂದ್ರ ಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಕೇಂದ್ರ ಶಾಲಾ ವಿದ್ಯಾಥರ್ಿನಿಯರಿಂದ ಸ್ವಾಗತ ಗೀತೆ ಹಾಡಿದರು. ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷ ಮಹಾಂತೇಶ ಗೋಳಸಂಗಿ ವಹಿಸಿದ್ದರು. ಧ್ವಜ ಸ್ತಂಭದ ಪೂಜೆ ಪುರಸಭೆ ಸದಸ್ಯ ಕರೆಪ್ಪ ಮಂಟೂರ ಮಾಡಿದರು. ಧ್ವಜಾರೋಹಣವನ್ನು ಎಲ್.ಬಿ.ಮುನ್ಯಾಳ ನೆರವೇರಿಸಿದರು. ಕ್ರೀಡಾ ಜ್ಯೋತಿಯನ್ನು ಪುರಸಭೆ ಸದಸ್ಯ ಕೆಂಪಣ್ಣ ಮೂಸಿ ಸ್ವಾಗತಿಸಿದರು. ರಾಯಬಾಗ ತಾಲೂಕಿನ ಪರೀವೀಕ್ಷಕರಾದ ಡಿ.ಎಸ್.ಡಿಗ್ರಜರವರು ನಿಣರ್ಾಯಕರಾದರು. ನಿಷ್ಪಕ್ಷಪಾತ, ತಾರತಮ್ಯವಿಲ್ಲದೆ ನಿರ್ಣಯಗಳನ್ನು ನೀಡಿ ಕ್ರೀಡಾಕೂಟದ ನಿಯಮಗಳನ್ನು ಹಾಗೂ ಮಹತ್ವವನ್ನು ತಿಳಿಯಪಡಿಸಿದರು. ನಿಮ್ಮ ನಿರ್ಣಯದಿಂದ ಒಳ್ಳೆಯ ಸ್ಪಧರ್ೆಗಳನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
24 ವಿವಿಧ ಶಾಲೆಗಳಿಂದ ಬಂದ ಸ್ಪಧರ್ಾಳುಗಳಿಗೆ ದೈಹಿಕ ಶಿಕ್ಷಕ ಮಾರುತಿ ಕಳ್ಳಿಗುದ್ದಿ ಪ್ರತಿಜ್ಞಾವಿಧಿ ಬೋಧಿಸಿದರು. ಸಿ.ಆರ್.ಪಿ ಎಸ್.ಬಿ.ಹಣಸಿ, ಡಿ.ವ್ಹಿ. ನಡಹಟ್ಟಿ. ಪುರಸಭೆ ಸದಸ್ಯ ಚಂದ್ರಕಾಂತ ಗೌಲತ್ತಿನವರ, ಶಿವಬಸು ಕಾಪಸಿ, ಶ್ರೀಕಾಂತ ಶೇಗುಣಸಿ, ಕುಮಾರ ಬಾಬಣ್ಣವರ, ಎಲ್ಲಾ ಶಾಲಾ ಶಿಕ್ಷಕ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.
ಎಸ್.ಬಿ. ಢವಳೇಶ್ವರ ಸ್ವಾಗತಿಸಿದರು. ಎಮ್.ಎಸ್.ಕಳ್ಳಿಗುದ್ದಿ ನಿರೂಪಿಸಿದರು. ವ್ಹಿ.ಬಿ.ಗಸ್ತಿ ವಂದಿಸಿದರು. ಪುರಸಭೆ ಅಧ್ಯಕ್ಷ ಗುಂಡು ಎಸೆಯುವ ಮೂಲಕ ಹಾಗೂ ಬಲೂನ ಹಾರಿಸುವ ಮೂಲಕ ಕ್ರೀಡಾಕೂಟಗಳಿಗೆ ಚಾಲನೆ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 