ಡೆಂಗ್ಯೂ, ಮಲೇರಿಯಾ: ಉಚಿತ ಲಸಿಕೆ ವಿತರಣೆ
ಲೋಕದರ್ಶನ ವರದಿ
ಬೈಲಹೊಂಗಲ ಜುಲೈ 11: ಪಟ್ಟಣದ ಶ್ರೀರಾಮ ಸೇನಾ ಹಿಂದೂಸ್ತಾನ ಘಟಕದ ವತಿಯಿಂದ ಪಟ್ಟಣದ ಇಂದಿರಾ ನಗರ, ಗೊಲ್ಲರ ಕಾಲನಿಯಲ್ಲಿ ಡೆಂಗ್ಯೂ, ಮಲೇರಿಯಾ ಮುನ್ನೆಚ್ಚರಿಕೆಯ ಕ್ರಮವಾಗಿ ಉಚಿತ ಲಸಿಕೆ ನೀಡಲಾಯಿತು.
ಇಂದಿರಾ ನಗರದ ವಿಠ್ಠಲ ದೇವ ಮಂದಿರದಲ್ಲಿ ಪುರಸಭೆ ಸದಸ್ಯ ವಿಜಯ ಬೋಳಣ್ಣವರ, ಮಾಜಿ ಸದಸ್ಯ ಬಸವರಾಜ ಕಲಾದಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನರ ಆರೋಗ್ಯದ ಹಿತದೃಷ್ಠಿಯಿಂದ ಸಂಘಟಣೆ ಮಾಡುತ್ತಿರುವ ಕಾರ್ಯ ಶ್ಲಾಘಣೀಯ ಎಂದರು.
ಪುರಸಭೆ ಸದಸ್ಯ ಉಳವಪ್ಪ ಬಡ್ಡಿಮನಿ, ಪಾಂಡಪ್ಪ ಇಂಚಲ, ರಾಜು ಬಡಿಗೇರ, ಬೋವಿ ಸಮಾಜದ ಮುಖಂಡ ಪ್ರಕಾಶ ಕೋಟಬಾಗಿ, ಎಸ್ಡಿಎಂಸಿ ಅಧ್ಯಕ್ಷ ಸುರೇಶ ಮದಲಬಾಂವಿ, ಕೆಂಪಣ್ಣ ಯರಮಳ್ಳಿ, ಸಂಘಟಣೆ ತಾಲೂಕ ಅಧ್ಯಕ್ಷ ಸಾಯಿರಾಮ ಜಂಬಗಿ, ನಗರ ಘಟಕ ಅಧ್ಯಕ್ಷ ವಿಜಯ ಪೂಜೇರಿ, ವಿಠ್ಠಲ ಬೆಳ್ಳಿಕಟ್ಟಿ, ರವಿ ಸವಟಗಿ, ಸಾಗರ ಹುಲಕುಂದ, ರಮೇಶ್ ನೀಲಗಾರ, ಸೊಮು ಪೂಜೇರಿ, ಪ್ರವೀಣ್ ಗೊಲ್ಲರ, ಉಮೇಶ ಗೊಲ್ಲರ ಹಾಗ ನೂರಾರು ಕಾರ್ಯಕರ್ತರು ಇದ್ದರು. 5 ವರ್ಷದ ಮೆಲ್ಪಟ್ಟವರಿಗೆ ಮನೆ, ಮನೆ ತೆರಳಿ ಲಸಿಕೆ ನೀಡಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 