ಮನೆ-ಮನೆಗೆ ತೆರಳಿ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿ ವಿತರಣೆ
ಲೋಕದರ್ಶನ ವರದಿ
ಮಾಂಜರಿ 24: ಕೃಷ್ಣಾ ನದಿಯ ಪ್ರವಾಹಕ್ಕೆ ತತ್ತರಿಸಿ ಆಸ್ತಿ-ಪಾಸಿ ಕಳೆದುಕೊಂಡು ಸಂಕಷ್ಟಕ್ಕೆ ಸುಕ್ಷೇತ್ರ ಯಡೂರ ಗ್ರಾಮದ ಸಂತ್ರಸ್ಥರಿಗೆ ಆರ,ಎಸ್.ಎಸ್ ಸಂಘಟಣೆಯ ಚಿಕ್ಕೋಡಿ ಜಿಲ್ಲಾ ಘಟಕದ ವತಿಯಿಂದ ಶನಿವಾರ ವಾರ ಮನೆ-ಮನೆಗೆ ತೆರಳಿ ಅಗತ್ಯ ಪದಾರ್ಥ ಮತ್ತು ಸಾಮಗ್ರಿಗಳನ್ನು ತರಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಅಮೃತ ಕುಲಕಣರ್ಿಯವರು ಮಾತನಾಡಿ ಪ್ರಸಕ್ತವರ್ಷ ಮಹಾ ಪ್ರವಾಹದಿಂದ ನದಿ ತೀರದ ಜನತೆ ತತ್ತರಿಸಿ ಹೋಗಿದ್ದು, ಪ್ರತಿಯೊಂದು ಮನೆಯಲ್ಲಿ ನೀರು ನುಗ್ಗಿ, ತಮ್ಮ ಅಗತ್ಯವಾದ ವಸ್ತುಗಳನ್ನು ಕಳೆದು ಕೊಂಡಿದ್ದಾರೆ. ಅವರಿಗೆ ತಾತ್ಕಾಲಿಕವಾಗಿ ಜೀವನ ರೋಪಿಸಿಕೊಳ್ಳುವುದರಗೊಸ್ಕರ ಆರ್,ಎಸ್.ಎಸ್ ಸಂಘಟಣೆ ಸಹಾಯಮಾಡಲು ಮುಂದಾಗಿದೆ ಎಂದರು. ಸುರೇಶ ಮೋಹಿತೆ ಮಾತನಾಡಿ ಹಲವು ನದಿ ತೀರದ ಜನರ ಮನೆಯಲ್ಲಿ ನಿರಿಕ್ಷೆಗೂ ಮೀರಿ ನೀರು ಹೋಗಿದ್ದರಿಂದ ಸದ್ಯ ಅವರು ಜೀಎವ ನಡೆಸುವುದು ಕಷ್ಟವಾಗಿದೆ ಅದಕ್ಕಾಗಿ ನಮ್ಮ ಸಂಘಟಣೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದೆವೆ ಎಂದು ಹೇಳಿದರು. ರಮೇಶ ಮೋಹಿತೆ, ಅಜೀತ ವಝೆ, ದೀಲಿಪ ವಝೆ, ಸುಭೋದ ವಝೆ, ವೃಷಭ ಪೂಜಾರಿ, ಸುಧೀರ ಗುರವ, ಸೋಮು ಜಡೆ, ದಾದು ಮಾನೆ ಓಂಕಾರ ಪೋತದಾರ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 