ಮನೆ-ಮನೆಗೆ ತೆರಳಿ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿ ವಿತರಣೆ
ಲೋಕದರ್ಶನ ವರದಿ
ಮಾಂಜರಿ 24: ಕೃಷ್ಣಾ ನದಿಯ ಪ್ರವಾಹಕ್ಕೆ ತತ್ತರಿಸಿ ಆಸ್ತಿ-ಪಾಸಿ ಕಳೆದುಕೊಂಡು ಸಂಕಷ್ಟಕ್ಕೆ ಸುಕ್ಷೇತ್ರ ಯಡೂರ ಗ್ರಾಮದ ಸಂತ್ರಸ್ಥರಿಗೆ ಆರ,ಎಸ್.ಎಸ್ ಸಂಘಟಣೆಯ ಚಿಕ್ಕೋಡಿ ಜಿಲ್ಲಾ ಘಟಕದ ವತಿಯಿಂದ ಶನಿವಾರ ವಾರ ಮನೆ-ಮನೆಗೆ ತೆರಳಿ ಅಗತ್ಯ ಪದಾರ್ಥ ಮತ್ತು ಸಾಮಗ್ರಿಗಳನ್ನು ತರಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಅಮೃತ ಕುಲಕಣರ್ಿಯವರು ಮಾತನಾಡಿ ಪ್ರಸಕ್ತವರ್ಷ ಮಹಾ ಪ್ರವಾಹದಿಂದ ನದಿ ತೀರದ ಜನತೆ ತತ್ತರಿಸಿ ಹೋಗಿದ್ದು, ಪ್ರತಿಯೊಂದು ಮನೆಯಲ್ಲಿ ನೀರು ನುಗ್ಗಿ, ತಮ್ಮ ಅಗತ್ಯವಾದ ವಸ್ತುಗಳನ್ನು ಕಳೆದು ಕೊಂಡಿದ್ದಾರೆ. ಅವರಿಗೆ ತಾತ್ಕಾಲಿಕವಾಗಿ ಜೀವನ ರೋಪಿಸಿಕೊಳ್ಳುವುದರಗೊಸ್ಕರ ಆರ್,ಎಸ್.ಎಸ್ ಸಂಘಟಣೆ ಸಹಾಯಮಾಡಲು ಮುಂದಾಗಿದೆ ಎಂದರು. ಸುರೇಶ ಮೋಹಿತೆ ಮಾತನಾಡಿ ಹಲವು ನದಿ ತೀರದ ಜನರ ಮನೆಯಲ್ಲಿ ನಿರಿಕ್ಷೆಗೂ ಮೀರಿ ನೀರು ಹೋಗಿದ್ದರಿಂದ ಸದ್ಯ ಅವರು ಜೀಎವ ನಡೆಸುವುದು ಕಷ್ಟವಾಗಿದೆ ಅದಕ್ಕಾಗಿ ನಮ್ಮ ಸಂಘಟಣೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದೆವೆ ಎಂದು ಹೇಳಿದರು. ರಮೇಶ ಮೋಹಿತೆ, ಅಜೀತ ವಝೆ, ದೀಲಿಪ ವಝೆ, ಸುಭೋದ ವಝೆ, ವೃಷಭ ಪೂಜಾರಿ, ಸುಧೀರ ಗುರವ, ಸೋಮು ಜಡೆ, ದಾದು ಮಾನೆ ಓಂಕಾರ ಪೋತದಾರ ಮುಂತಾದವರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 