ಕೊಪ್ಪಳದಲ್ಲಿ ಕಾಂಗ್ರೆಸ್ ವಿಜಯೋತ್ಸವ
ಲೋಕದರ್ಶನ ವರದಿ
ಕೊಪ್ಪಳ: ರಾಜ್ಯದಲ್ಲಿ ಜರುಗಿದ ಬಾಗಲಕೊಟೆ ಜಿಲ್ಲೆಯ ಜಮಖಂಡಿ ಹಾಗೂ ರಾಮನಗರ ಜಿಲ್ಲೆಯ ರಾಮನಗರ ವಧಾನ ಸಭೆಯ ಉಪ ಚುನಾವಣೆ ಹಾಗೂ ಬಳ್ಳಾರಿ ಶಿವಮೊಗ್ಗ ಮತ್ತು ಮಂಡ್ಯ ಲೋಕಸಭೆಗೆ ಜರುಗಿದ ಉಪಚುನಾವಣೆಯ ಒಟ್ಟು ಐದು ಕ್ಷೇತ್ರದಲ್ಲಿ ಎರಡು ಕಾಗ್ರೆಸ್ ಎರಡು ಜೆಡಿಎಸ್ ಪಕ್ಷ ಗೆಲವುಸಾದಿಸಿ ಸೂಕ್ಕಿಗೆ ಬಂದಿದ ಬಿಜೆಪಿಗೆ ಸುಣ್ಣದ ನೀರು ಕೂಡಿಸಿದ ದೂಸ್ತಿ ಸಕರ್ಾರದ ಸಂಭ್ರಮಾಚರಣೆ ಪ್ರಯುಕ್ತ ಕೊಪ್ಪಳದಲ್ಲಿ ಕಾಂಗ್ರೇಸ್ ಭಾರಿ ವಿಜಯೋತ್ಸವ ಆಚರಿಸಿತು.
ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಒಟ್ಟು ಐದರಲ್ಲಿ ನಾಲ್ಕು ಸ್ಥಾನ ಗಳಿಸಿದ ಮೈತ್ರಿ ಪಕ್ಷ ಅದರಲ್ಲೂ ವಿಶೇಷವಾಗಿ ಬಳ್ಳಾರಿ ಲೋಕಸಭೆ ಮತ್ತು ಜಮಖಂಡಿ ವಿಧಾನಸಭೆಯ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯಥರ್ಿಗಳು ಜಯ ಸಾದಿರುವುದಕ್ಕೆ ಭಾರಿ ವಿಜಯೋತ್ಸವ ಅಚರಿಸಿದರು ನಗರದ ಆಶೋಕ ಸರ್ಕಲ್ ಬಳಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ನತೃತ್ವದಲ್ಲಿ ಸಂಭ್ರಮಸಿ ಪಟಕಿಸಿಡಿಸಿ ಸಿಹಿ ಹಂಚಿಸಿ ವಿಜಯೋತ್ಸವ ಆಚರಿಸಿದರು
ಶಾಸಕ ಕೆ.ರಾಘವೆಂದ್ರ ಹಿಟ್ನಾಳ್ ಮುಖಂಡರಾದ ಸುರೇಶ ಭುಮರಡ್ಡಿ ಅಮ್ಜದ್ ಪಟೇಲ್ ಎಂ.ಪಾಷಾ ಕಾಟನ್,ಇಂದರ ಬಾವಿಕಟ್ಟಿ, ಕಿಶೋರಿ ಬೂದುರು, ಉಮಜನಾದ್ರಿ, ಮಹೆಬೂಬ್ ಮಚ್ಚಿ, ಇಬ್ರಾಹಿಂ ಅಡದಡೆವಾಲೆ, ಕೃಷ್ಣ ಇಟ್ಟಂಗಿ, ಪ್ರಸನ್ನ ಗಡಾದ್, ರವಿ ಕೊರುಗೂಡ್, ನಗರ ಸಭೆಯ ಸದಸ್ಯರಾದ ಅಕ್ಬರ್ ಪಾಷಾ ಪಲ್ಟನ್, ವಿರುಪಾಕ್ಷಪ್ಪ ಮೂರ ನಾಳ್, ಸಿದ್ದಲಿಂಗಯ್ಯ ಹೀರೆಮಠ, ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 