ಛತ್ರಪತಿ ಶಿವಾಜಿ ಜಯಂತಿ ಆಚರಣೆ
ಲೋಕದರ್ಶನ ವರದಿ
ಕಾಗವಾಡ:ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ಯ ಉಗಾರ ಖುರ್ದ ಪಟ್ಟಣದಲ್ಲಿ ಮಹಾರಾಜರ ಪ್ರತಿಮೆಯ ಭವ್ಯ ಮೆರವಣಿಗೆ ಜರುಗಿತು.
ಉಗಾರದ ಡಾ. ಜೋಗ ವೃತ್ತದಿಂದ ಛತ್ರಪತಿ ಪ್ರತಿಮೆಗೆ ಸಮಾಜದ ಹಿರಿಯರಾದ ಮಾರುತಿ ದೇಸಾಯಿ ಪೂಜೆ ಸಲ್ಲಿಸಿದರು. ಎಲ್ಲ ಪುರಸಭೆ ಸದಸ್ಯರು, ಮರಾಠಾ ಮಂಡಳದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಜಿಜಾವು ಮಹಿಳಾ ಮಂಡಳದ ಕಾರ್ಯಕರ್ತರು, ಫೇಟಾ ಧರಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಎಲ್ಲೆಡೆ 'ಜಯ ಶಿವಾಜಿ, ಜಯ ಭವಾನಿ' ಸ್ವರಣಾದ ಕೇಳಿ ಬರುತ್ತಿತ್ತು. ಬೆಳಿಗ್ಗೆ ಪಟ್ಟಣದ ಮರಾಠಾ ಮತ್ತು ಇತರ ಸಮಾಜದ ಮಹಿಳೆಯರು ಛತ್ರಪತಿ ಶಿವಾಜಿ ಮಹಾರಾಜರ ತೋಟ್ಟಲ ತೂಗುವ್ ಕಾರ್ಯಕ್ರಮ ನೇರವೆರಿಸಿ, ಪಲ್ಲಕ್ಕಿದೊಂದಿಗೆ ಸುಮಂಗಲಿಯರು ಕೃಷ್ಣಾ ನದಿಗೆ ತರಳಿ ಜಲ ಕುಂಭಗಳನ್ನು ತೆಗೆದುಕೊಂಡು ಲಕ್ಷ್ಮೀ ಮಂದಿರ ಹತ್ತಿರದ ಶಿವತಿರ್ಥ ಮಹಾರಾಜರ ಪುತ್ತಳಿಗೆ ಜಲಾಭಿಷೇಕ ಮಾಡಿದರು.
ಮಿರಜದ ಖ್ಯಾತ ಢೋಲ ತಾಷಾ 25 ಜನರ ವಿಶೇಷ ಪಥಕದ ದೃಶ್ಯ ಕಾಣಲು ಅನೇಕರು ಪಾಲ್ಗೊಂಡಿದ್ದರು. ಸುಮಾರು 5 ಗಂಟೆ ಕಾಲ ಮೆರವಣಿಗೆ ನೆರವೇರಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 