ಲಂಚ ಸ್ವೀಕಾರ ಕಿರಣ ತೇರದಾಳ ಎಸಿಬಿ ಬಲಿಗೆ
ಶಿಗ್ಗಾವಿ 20: ಬಂದಿಖಾನೆಯಲ್ಲಿರುವ ಕೈದಿಗಳಿಗೆ ನಿತ್ಯ ಊಟ ಸರುಬುರಾಜು ಮಾಡುತ್ತಿದ್ದ ಶಿಗ್ಗಾವಿ ಪಟ್ಟಣದ ರೇಣುಕಾ ಹೊಟೇಲ್ ಮಾಲೀಕರಿಗೆ ಊಟದ ಬಿಲ್ ಪಾವತಿಸಲು ಕಂದಾಯ ಇಲಾಖೆ ದಾಖಲೆ ಕೋಠಡಿ ಕ್ಲಕರ್್, ಬಂಧಿಖಾನೆ ಜೈಲರ್ ಕಿರಣ ತೇರದಾಳ ಎಂಬವರು 75 ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲಿಗೆ ಬಿದ್ದ ಪ್ರಸಂಗ ಮಂಗಳವಾರ ನಡೆದಿದೆ.
ಹೊಟೇಲ್ ಮಾಲೀಕ ಶಂಕ್ರಪ್ಪ ಯಲ್ಲಪ್ಪ ಗೌಳಿ ಅವರಿಗೆ 2017 ರಿಂದ ಕೈದಿಗಳಿಗೆ ಊಟ ಸರುಬುರಾಜ ಮಾಡಿದ್ದ 6 ಲಕ್ಷ ರೂ. ಬಿಲ್ ಪಾವತಿಸಲು 1 ಲಕ್ಷ ರೂ.ಲಂಚದ ಹಣ ಕೇಳಿದ್ದಾರೆ ಎಂದು ಎಸಿಬಿ ಅಧಿಕಾರಿಗಳಿಗೆ ಗೌಳಿ ಅವರು ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ಎಸಿಬಿ ಡಿವೈಎಸ್ಪಿ ಪ್ರಲ್ಹಾದ ಎಸ್.ಕೆ., ಅವರ ನೇತೃತ್ವದಲ್ಲಿ ಕೈಗೊಂಡ ದಾಳಿ ವೇಳೆ ಹಣ ಪಡೆಯತ್ತಿದ್ದಾಗ ಕಿರಣ ತೇರದಾಳ ಸಿಕ್ಕು ಬಿದ್ದಿದ್ದಾರೆ.
ಲಂಚದ ಹಣ ಪಡೆಯತ್ತಿದ್ದ ತೇರದಾಳ ಅವರನ್ನು ಬಂದಿಸಿದ್ದೇವೆ. ಘಟನೆ ಕುರಿತು ಕೈಗೊಳ್ಳಲಾದ ತನಿಖೆ ಪೂರ್ಣಗೊಂಡ ಬಳಿಕ ಸಂಜೆ ನ್ಯಾಯಾಧಿಶರ ಮುಂದೆ ಹಾಜರು ಪಡಿಸುವುದಾಗಿ ಎಸಿಬಿ ಡಿವೈಎಸ್ಪಿ ಪ್ರಲ್ಹಾದ ಎಸ್.ಕೆ. ತಿಳಿಸಿದ್ದಾರೆ.
ದಾಳಿಯಲ್ಲಿ ಇನ್ಸಪೆಕ್ಟರ್ಗಳಾದ ಬಸವರಾಜ ಹಳಬಣ್ಣ, ಸುದರ್ಶನ ಸೇರಿದಂತೆ ಎಸಿಬಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 