ಲಂಚ ಸ್ವೀಕಾರ ಕಿರಣ ತೇರದಾಳ ಎಸಿಬಿ ಬಲಿಗೆ
ಶಿಗ್ಗಾವಿ 20: ಬಂದಿಖಾನೆಯಲ್ಲಿರುವ ಕೈದಿಗಳಿಗೆ ನಿತ್ಯ ಊಟ ಸರುಬುರಾಜು ಮಾಡುತ್ತಿದ್ದ ಶಿಗ್ಗಾವಿ ಪಟ್ಟಣದ ರೇಣುಕಾ ಹೊಟೇಲ್ ಮಾಲೀಕರಿಗೆ ಊಟದ ಬಿಲ್ ಪಾವತಿಸಲು ಕಂದಾಯ ಇಲಾಖೆ ದಾಖಲೆ ಕೋಠಡಿ ಕ್ಲಕರ್್, ಬಂಧಿಖಾನೆ ಜೈಲರ್ ಕಿರಣ ತೇರದಾಳ ಎಂಬವರು 75 ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲಿಗೆ ಬಿದ್ದ ಪ್ರಸಂಗ ಮಂಗಳವಾರ ನಡೆದಿದೆ.
ಹೊಟೇಲ್ ಮಾಲೀಕ ಶಂಕ್ರಪ್ಪ ಯಲ್ಲಪ್ಪ ಗೌಳಿ ಅವರಿಗೆ 2017 ರಿಂದ ಕೈದಿಗಳಿಗೆ ಊಟ ಸರುಬುರಾಜ ಮಾಡಿದ್ದ 6 ಲಕ್ಷ ರೂ. ಬಿಲ್ ಪಾವತಿಸಲು 1 ಲಕ್ಷ ರೂ.ಲಂಚದ ಹಣ ಕೇಳಿದ್ದಾರೆ ಎಂದು ಎಸಿಬಿ ಅಧಿಕಾರಿಗಳಿಗೆ ಗೌಳಿ ಅವರು ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ಎಸಿಬಿ ಡಿವೈಎಸ್ಪಿ ಪ್ರಲ್ಹಾದ ಎಸ್.ಕೆ., ಅವರ ನೇತೃತ್ವದಲ್ಲಿ ಕೈಗೊಂಡ ದಾಳಿ ವೇಳೆ ಹಣ ಪಡೆಯತ್ತಿದ್ದಾಗ ಕಿರಣ ತೇರದಾಳ ಸಿಕ್ಕು ಬಿದ್ದಿದ್ದಾರೆ.
ಲಂಚದ ಹಣ ಪಡೆಯತ್ತಿದ್ದ ತೇರದಾಳ ಅವರನ್ನು ಬಂದಿಸಿದ್ದೇವೆ. ಘಟನೆ ಕುರಿತು ಕೈಗೊಳ್ಳಲಾದ ತನಿಖೆ ಪೂರ್ಣಗೊಂಡ ಬಳಿಕ ಸಂಜೆ ನ್ಯಾಯಾಧಿಶರ ಮುಂದೆ ಹಾಜರು ಪಡಿಸುವುದಾಗಿ ಎಸಿಬಿ ಡಿವೈಎಸ್ಪಿ ಪ್ರಲ್ಹಾದ ಎಸ್.ಕೆ. ತಿಳಿಸಿದ್ದಾರೆ.
ದಾಳಿಯಲ್ಲಿ ಇನ್ಸಪೆಕ್ಟರ್ಗಳಾದ ಬಸವರಾಜ ಹಳಬಣ್ಣ, ಸುದರ್ಶನ ಸೇರಿದಂತೆ ಎಸಿಬಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ 