ಅಥಣಿ ತಾಲೂಕಾ ತಾಂವಶಿ ಗ್ರಾಮ: ಸಿಲಿಂಡರ ಸ್ಪೋಟದಿಂದ ಹಾನಿ: ಕುಟುಂಬಕ್ಕೆ ಸಹಾಯ
ಸಂಬರಗಿ 15: ತಾಂವಶಿ ಗ್ರಾಮದ ಹೋರವಲಯದ ತೋಟದ ವಸತಿಯ ಯಲ್ಲಪ್ಪ ದುಂಡಪ್ಪಾ ಉಪ್ಪಾರ ಸೇರು ಒಟ್ಟು ಮೂರು ಕುಟುಂಬಗಳು ವಾಸವಾಗಿದ್ದವು. ಇವರ ಗುಡಿಸಿನಲ್ಲಿ ಗುರುವಾರ ಬೆಳಗಿನ ಜಾವ ಆಕಸ್ಮಿಕವಾಗಿ ಗ್ಯಾಸ ಸಿಲಿಂಡರ್ ಸ್ಪೋಟಗೊಂಡು ಲಕ್ಷಾಂತರ ರೂಪಾಯಿ ಹಾನಿಗೊಳಗಾದ ಕುಟುಂಬಕ್ಕೆ ಎಲ್ಲ ಗ್ರಾಮಸ್ಥರು ಕೂಡಿಕೊಂಡು ಸಹಾಯಧನವನ್ನು ಸಂಗ್ರಹಮಾಡಿ ಆ ಕುಟುಂಬಕ್ಕೆ ಸಾಂಸಾರಿಕ ಉಪಯೋಗ ವಸ್ತುಗಳು ಹಾಗೂ ವಾಸಿಸಲು ಬೇಕಾಗುವ ಸಲಕರಣೆಗಳನ್ನು ಸಹಾಯಹಸ್ತವಾಗಿ ನೀಡಿದರು.
ಗ್ರಾಮದ ಗಣ್ಯರಾದ ರಾಮಗೌಡಾ ಲಖಗೌಡರ, ಅಣ್ಣಪ್ಪಾ ಇಮಗೌಡರ್, ರಾಜು ಪರಸಗೌಡಾ ಪಾಟೀಲ, ಭೀಮಗೌಡ ಪೀರಗೌಡಾ ಪಾಟೀಲ, ಶಿವಯ್ಯ ಹೀರೆಮಠ, ಜಗದೀಶ ಲಖಗೌಡರ ಸೇರಿದಂತೆ ಅನೇಕರು ಸೇರಿ ಹಣವನ್ನು ಸಂಗ್ರಹ ಮಾಡಿ ಜೀವನೋಪಾಯದ ವಸ್ತುಗಳನ್ನು ಖರೀದಿಸಿ ನೊಂದ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ತಾಂವಶಿ ಗ್ರಾಮದ ಹೊರ ವಲಯದ ಯಲ್ಲಪ್ಪಾ ಉಪ್ಪಾರ ಇವರ ಗುಡಿಸಲು ಗ್ಯಾಸ ಸಿಲಿಂಡರ್ ಸ್ಪೋಟಗೊಡ ಕುಟುಂಬಕ್ಕೆ : ಶುಕ್ರವಾರ ಅಥಣಿ ಶುಗರ್ಸ್ ಕಾರ್ಯಕಾರಿ ನಿದರ್ೆಶಕ ಶ್ರಿನಿವಾಸ ಪಾಟೀಲ, ಅನಂತಪೂರ ಬ್ಲಾಕ್ ಅಧ್ಯಕ್ಷ ಮಹಾದೇವ ಕರೆ, ಕಾಂಗ್ರೆಸ್ ಮುಖಂಡರಾದ ಆರ್.ಎಮ್.ಪಾಟೀಲ ಭೇಟ್ಟಿ ನೀಡಿ ಸಾಂತ್ವನ ಹೇಳಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 