ಅಥಣಿ: ದತ್ತಿ ಉಪನ್ಯಾಸ ಕಾರ್ಯಕ್ರಮ: ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಮಠಪತಿ
ಅಥಣಿ 29: ವಚನ ಸಾಹಿತ್ಯ ಅವರವರ ಜೀವನ ಕ್ರಮ ಬದುಕಿನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ. ಶರಣರ ಬದುಕನ್ನು ಕೇವಲ ಪವಾಡವಾಗಿ ಸ್ವೀಕರಿಸದೆ ಅವರ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪನ್ಯಾಸಕ ಶರಣ ವಿಚಾರ ವಾಹಿನಿ, ಹಾರೂಗೇರಿ ಅಧ್ಯಕ್ಷ ಆಯ್.ಆರ್. ಮಠಪತಿ ಹೇಳಿದರು.
ಅವರು ಸ್ಥಳೀಯ ಕೆ.ಎ. ಲೋಕಾಪೂರ ಪದವಿ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಳಗಾವಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕೆ.ಎ. ಲೋಕಾಪೂರ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಲಿಂ ಶರಣೆ ನೀಲಮ್ಮ ಮತ್ತು ಶರಣ ಮಲಕಪ್ಪ ಅಲಿಬಾದಿ, ಲಿಂ ಶರಣೆ ಹೊನ್ನಮ್ಮ ಬಸಪ್ಪ ಉತ್ನಾಳ, ಲಿಂ ಶರಣ ಚನ್ನಯ್ಯ ಬಸವಂತಯ್ಯ ಹಿರೇಮಠ ಹಾಗೂ ಲಿಂ ಶರಣೆ ಗಂಗಮ್ಮ ಹಟಪದ ಹಲಗಲಿ ಅವರ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶರಣರ ಸಾಹಿತ್ಯ ಮಾನವನಲ್ಲಿರುವ ಅಸುರೀಗುಣಗಳನ್ನು ದೈವೀಗುಣಗಳನ್ನಾಗಿ ಪರಿವತರ್ಿಸುವ ಶಕ್ತಿ ಹೊಂದಿವೆ. ಮಾನವನನ್ನು ದೈವತ್ವದೆಡೆಗೆ ಕರೆದುಕೊಂಡು ಹೋಗುವಂತಹ ಸುಲಭದ ಸಾದನಗಳೇ ಶರಣರ ವಚನಗಳು, ಅವುಗಳನ್ನು ದಿನನಿತ್ಯದ ಜೀವನಕ್ರಮದಲ್ಲಿ ಅಳವಡಿಸಿಕೊಂಡು ನಿಜವಾದ ಜ್ಞಾನ ಪ್ರಾಪ್ತಿಯಾಘುವಂತೆ ಮಾಡಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ತ ಬೆಳಗಾವಿ ಜಿಲ್ಲಾಧ್ಯಕ್ಷ ಡಾ.ವಿ.ಎಸ್. ಮಾಳಿ ಶರಣರ ತತ್ವಗಳನ್ನು ನೆನಪಿಸುವ ಕಾರ್ಯಕ್ರಮ ಇದಾಗಿದ್ದು, ಇದರ ಮೂಲಕ ವಚನ ಸಾಹಿತ್ಯವನ್ನು ಮತ್ತೆ ಮತ್ತೆ ಓದಿ ಅಳವಡಿಸಿಕೊಂಡು ಜ್ಞಾನದ ಬೆಳಕನ್ನು ಪಡೆದು ಹೊಸ ಚಿಂತನೆಗಳಿಗೆ ವಿದ್ಯಾಥರ್ಿಗಳಿಗೆ ದಾರಿಯಾಗುವಂತಾಗಬೇಕು ಎಂದರು.
ವಿಮೋಚನಾ ಸಂಘದ ಅಧ್ಯಕ್ಷ ಬಿ.ಎಲ್.ಪಾಟೀಲ, ಡಾ.ರಾಮ.ಕುಲಕಣರ್ಿ ಮಾತನಾಡಿದರು. ಸಾಹಿತಿಗಳಾದ ಎ.ಎಮ್. ಅಲಿಬಾದಿ, ಅಥಣಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಅನೀಲ ಸುಣಧೋಳಿ, ಪ್ರಾಚಾರ್ಯ ಆರ್.ಎಮ್. ದೇವರಡ್ಡಿ .ಕೇಂದ್ರ ಸಾಹಿತ್ಯ ಅಕಾಡೇಮಿ ಸದಸ್ಯ ಬಾಳಾಸಾಹೇಬ ಲೋಕಾಪೂರ, ಎಸ್. ಕೆ. ಹೊಳೆಪ್ಪನವರ, ಮುಂತಾದವರು ಉಪಸ್ಥಿತರಿದ್ದರು.
ಎನ್.ಬಿ.ಝರೆ ನಿರೂಪಿಸಿದರು, ವಿ. ಪಿ. ಜಾಲಿಹಾಳ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 